- Advertisement -
- Advertisement -
ಉಡುಪಿ: ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ ಮಾಜಿ ಪ್ರಧಾನಿ ಅಜಾತಶತ್ರು ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆ ಪ್ರಯುಕ್ತ “ಅಟಲ್ ಟ್ರೋಫಿ ” ರಾಷ್ಟ್ರಮಟ್ಟದ ಆಯ್ದ ತಂಡಗಳ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟದ ನಡೆಯಲಿದೆ.
ಬಿಜೆಪಿ ಉಡುಪಿ ನಗರ, ಯುವ ಮೋರ್ಚಾ ಉಡುಪಿ ನಗರ ಮತ್ತು ವಾಲಿಬಾಲ್ ಫ್ರೆಂಡ್ಸ್ ಹನುಮಂತನಗರ ಸಹಭಾಗಿತ್ವದಲ್ಲಿ ಡಿ . 25 ರಂದು ನಿಟ್ಟೂರು ಸಿಲಾಸ್ ಇಂಟರ್ ನ್ಯಾಷನಲ್ ಶಾಲೆಯ ಮೈದಾನದಲ್ಲಿ ” ಅಟಲ್ ಟ್ರೋಫಿ ” ರಾಷ್ಟ್ರಮಟ್ಟದ ಆಯ್ದ ತಂಡಗಳ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟದ ಬಗ್ಗೆ ಪತ್ರಿಕಾಗೋಷ್ಠಿ ನಡೆಸಲಾಯಿತು .
ಸುದ್ದಿಗೋಷ್ಠಿಯಲ್ಲಿ ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್ , ಮಂಜುನಾಥ್ ಮಣಿಪಾಲ್ , ರೋಷನ್ ಶೆಟ್ಟಿ , ಸಂತೋಷ್ ಜತ್ತನ್ , ದಿನೇಶ್ ಕುಂದರ್ , ವಿಶ್ವನಾಥ್ ಪೂಜಾರಿ ಉಪಸ್ಥಿತರಿದ್ದರು .
- Advertisement -