Thursday, June 4, 2026
Homeಅಪರಾಧಕಾಸರಗೋಡು: ಕಾಲೇಜಿನ ಪ್ರಾಂಶುಪಾಲೆಗೆ ಹತ್ಯೆ ಬೆದರಿಕೆ- ಮೂವತ್ತು ಮಂದಿಯ ವಿರುದ್ದ ಪ್ರಕರಣ ದಾಖಲು

ಕಾಸರಗೋಡು: ಕಾಲೇಜಿನ ಪ್ರಾಂಶುಪಾಲೆಗೆ ಹತ್ಯೆ ಬೆದರಿಕೆ- ಮೂವತ್ತು ಮಂದಿಯ ವಿರುದ್ದ ಪ್ರಕರಣ ದಾಖಲು

- Advertisement -
- Advertisement -

ಕಾಸರಗೋಡು: ಸರ್ಕಾರಿ ಕಾಲೇಜಿನ ಪ್ರಾಂಶುಪಾಲೆ ಎಂ.ರಮಾ ಅವರಿಗೆ ಕಾಲೇಜಿನೊಳಗೆ ಅವಹೇಳನಗೈದು ಹತ್ಯೆ ಬೆದರಿಕೆಯೊಡ್ಡಿದ ಘಟನೆಗೆ ಸಂಬಂಧಿಸಿ 30 ಮಂದಿಯ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾಲೇಜಿನ 22ನೇ ಸಂಖ್ಯೆಯ ತರಗತಿ ಕೊಠಡಿಯಲ್ಲಿ ಕಾಲೇಜಿಗೆ ಸಂಬಂಧವಿಲ್ಲದ 30 ಮಂದಿ ಕುಳಿತುಕೊಂಡಿದ್ದರು. ಅವರನ್ನು ಪ್ರಶ್ನಿಸಿದಾಗ ಅವಹೇಳನಗೈದು ಹತ್ಯೆ ಬೆದರಿಕೆಯೊಡ್ಡಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಂತೆ ಕೇಸು ದಾಖಲಿಸಲಾಗಿದೆ.

ಮೌಲ್ಯ ನಿರ್ಣಯ ಶಿಬಿರ ನಡೆಯುತ್ತಿರುವುದರಿಂದಾಗಿ ಯಾವುದೇ ತರಗತಿ ನಡೆಯುತ್ತಿರಲಿಲ್ಲ. ಕಾಲೇಜಿನಲ್ಲಿ ನಡೆಯುತ್ತಿರುವ ದುರಸ್ತಿ ಕೆಲಸಗಳನ್ನು ಪರಿಶೀಲಿಸಿ ಹಿಂತಿರುಗುವಾಗ ತರಗತಿಯಲ್ಲಿ ಜನರ ಗುಂಪು ಕಂಡುಬಂದಿದ್ದು, ಈ ಬಗ್ಗೆ ಪ್ರಶ್ನಿಸಿದಾಗ ಹಲ್ಲೆಗೆ ಯತ್ನ ನಡೆಯಿತು. ವಶಕ್ಕೆ ಪಡೆದ 30 ಮಂದಿಯನ್ನು ಮುಸ್ಲಿಂ ಲೀಗ್ ಕಾರ್ಯಕರ್ತರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

- Advertisement -

Latest News

error: Content is protected !!