- Advertisement -
- Advertisement -
ಮಣಿಪಾಲ: ಕರಾವಳಿಯಾದ್ಯಂತ ಕೋಮುದ್ವೇಷಕ್ಕೆ ಒಂದರ ಹಿಂದೊಂದರಂತೆ ಹತ್ಯೆಗಳು ನಡೆಯುತ್ತಿದ್ದು, ಇಡೀ ರಾಜ್ಯಾದ್ಯಂತ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ. ಕೋಮು ದಳ್ಳುರಿ ಹೆಚ್ಚುತ್ತಲೇ ಇದ್ದು, ಇದಕ್ಕೆ ಕಡಿವಾಣ ಹಾಕಲು ಸರ್ಕಾರವೂ ವಿಫಲವಾಗಿದೆ.
ಇನ್ನು ಈ ಬಗ್ಗೆ ಮಣಿಪಾಲದಲ್ಲಿ ಪ್ರತಿಕ್ರಿಯಿಸಿದ ಸಚಿವ ವಿ.ಸುನೀಲ್ ಕುಮಾರ್, ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಸೂಕ್ತ ತನಿಖೆ ನಡೆಸುತ್ತಿದ್ದಾರೆ. ಹಾಗೇ ಸರ್ಕಾರವೂ ಪೊಲೀಸರಿಗೆ ಹಂತಕರನ್ನು ಸೆರೆಹಿಡಿಯಲು ಮುಕ್ತ ಅವಕಾಶ ನೀಡಿದೆ. ಈ ಕೃತ್ಯದ ಹಿಂದೆ ಯಾರ್ಯಾರ ಕೈವಾಡ ಇದೆ ಎಂಬುದರ ಬಗ್ಗೆಯೂ ಮಹತ್ವದ ಸುಳಿವು ಪೊಲೀಸರಿಗೆ ಸಿಕ್ಕಿದೆ. ತನಿಖೆಯಲ್ಲಿ ನಾನು ಹಸ್ತಕ್ಷೇಪ ಮಾಡಲ್ಲ ಅಂತ ಹೇಳಿದ್ರು.
- Advertisement -