- Advertisement -
![]()
- Advertisement -
ಶ್ರೀನಗರ: ಕಾಶ್ಮೀರದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ವರ್ಷದ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಭಾರಿ ಮಳೆಯಿಂದಾಗಿ ಭೂ ಕುಸಿತವಾಗಬಹುದಾದ ಸಾಧ್ಯತೆಗಳ ಹಿನ್ನಲೆಯಲ್ಲಿ ಪೆಹಲ್ಗಾಮ್ ಮತ್ತು ಬಲ್ಟಾಲ್ ಎರಡು ಮಾರ್ಗಗಳಲ್ಲಿ ಯಾತ್ರಾರ್ಥಿಗಳು ತೆರಳಲು ನಿರ್ಬಂಧ ವಿಧಿಸಲಾಗಿದೆ.
ಈವರೆಗೂ 3.93 ಲಕ್ಷ ಮಂದಿ ಅಮರನಾಥ ಯಾತ್ರೆ ಕೈಗೊಂಡು ಹಿಮಲಿಂಗ ದರ್ಶನ ಪಡೆದಿದ್ದಾರೆ.
ಪ್ರಸಕ್ತ ಋತುವಿನಲ್ಲಿ ಜುಲೈ 3 ರಿಂದ ಆರಂಭಬಾಗಿರುವ ಅಮರನಾಥ ಯಾತ್ರೆ ಆಗಸ್ಟ್ 9 ರವರೆಗೆ ನಡೆಯಲಿದೆ.
- Advertisement -


