- Advertisement -
- Advertisement -
ಬೆಂಗಳೂರು:ರಾಜ್ಯದಲ್ಲಿ ಧಾರಾಕಾರ ಸುರಿದ ಮಳೆಯಿಂದ ಆಗುಂಬೆ ಘಾಟ್ನಲ್ಲಿ ಮಣ್ಣು ಕುಸಿತ ಗೊಂಡ ಹಿನ್ನೆಲೆ ಗೃಹ ಸಚಿವ ಅರಗ ಜ್ಞಾನೇಂದ್ರ ಮಾತನಾಡಿ ʻಆಗುಂಬೆ ಘಾಟ್ನಲ್ಲಿ ಕುಸಿದ ಮಣ್ಣು ತೆರವು ಮಾಡಲಾಗಿದ್ದು, ವಾಹನ ಸಂಚಾರಕ್ಕೆ ಅನುವು ಮಾಡಿ ಕೊಡಲಾಗಿದೆ ಎಂದಿದ್ದಾರೆ.
ಆಗುಂಬೆ ಘಾಟ್ನಲ್ಲಿ ಕುಸಿದ ಮಣ್ಣು ತೆರವು ಮಾಡಲಾಗಿದೆ. ಎರಡು ದಿನಗಳ ಬಳಿಕ ವಾಹನ ಸಂಚಾರ ಮಾಡಬಹುದು. ಎರಡು ದಿನಗಳ ಬಳಿಕ ವಾಹನ ಓಡಾಡಿದ್ರೆ ಒಳ್ಳೆಯದು. ಆಗುಂಬೆ 11ನೇ ಘಾಟ್ನಲ್ಲಿ ಸಣ್ಣ ತೊರೆಗಳಿವೆ. ಘಾಟ್ನಲ್ಲಿ ಏನು ಆಗತ್ತೆ ಅಂತ ಹೇಳಲು ಆಗಲ್ಲ ಹೀಗಾಗಿ ಡಿಸಿಗೆ ಕ್ರಮವಹಿಸಲು ಸೂಚಿಸಿದ್ದೇನೆ ಎಂದಿದ್ದಾರೆ.
- Advertisement -