- Advertisement -
- Advertisement -
ರಾಮನಗರ: ಇಲ್ಲಿನ ಕಗ್ಗಲಿಪುರ ಪೊಲೀಸ್ ಠಾಣೆ ವ್ಯಾಪ್ತಿಯ ತರುಳು ಗ್ರಾಮದ ಬಳಿ ಅಗರಬತ್ತಿ ಕಾರ್ಖಾನೆಯು ಅಗ್ನಿ ಅವಘಡ ಸಂಭವಿಸಿ ಹೊತ್ತಿ ಉರಿದಿದೆ. ಈ ಅಗ್ನಿ ಅವಘಡದಲ್ಲಿ ಲಕ್ಷಾಂತರ ರೂಪಾಯಿ ನಷ್ಟವಾಗಿರುವ ಕುರಿತು ವರದಿಯಾಗಿದೆ.
ಕಾರ್ಖಾನೆಯಲ್ಲಿದ್ದ ಎಲ್ಲಾ ಸಿಬ್ಬಂದಿಗಳು ತಕ್ಷಣ ಹೊರ ಬಂದಿದ್ದು ಅಪಾಯದಿಂದ ಪಾರಾಗಿದ್ದಾರೆ. ನೋಡ ನೋಡುತ್ತಲೇ ಬೆಂಕಿ ಇಡೀ ಕಾರ್ಖಾನೆಯನ್ನೆ ಆವರಿಸಿದೆ. ಶುಕ್ರವಾರ ತರಳು ಹಾಗೂ ಗುಳೈಕ್ ಗ್ರಾಮಗಳ ನಡುವಿನ ಕಗ್ಗಲಿಪುರ-ಬನ್ನೇರಘಟ್ಟ ಮುಖ್ಯ ರಸ್ತೆಯಲ್ಲಿನ ಅಗರಬತ್ತಿ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.
- Advertisement -