- Advertisement -
- Advertisement -
ಮಂಗಳೂರು: ಕೆಜಿಎಫ್ ಚಲನಚಿತ್ರದ ನಾಯಕಿ ನಟಿ ಶ್ರೀನಿಧಿ ಶೆಟ್ಟಿ ತನ್ನ ಕುಟುಂಬದ ದೈವಗಳಿಗೆ ಹರಕೆಯ ನೇಮೋತ್ಸವ ನೆರವೇರಿಸಿದ್ದಾರೆ.
ಕಿನ್ನಿಗೋಳಿಯಲ್ಲಿರುವ ಶ್ರೀನಿಧಿ ಶೆಟ್ಟಿ ಕುಟುಂಬದ ಮನೆ ತಾಳಿಪಾಡಿಗುತ್ತುವಿನಲ್ಲಿ ಹರಕೆ ನೇಮೋತ್ಸವ ನಡೆಯಿತು.
ಈ ಹಿಂದೆ ತನ್ನ ಇಷ್ಟಾರ್ಥ ಸಿದ್ದಿಗಾಗಿ ನೇಮೋತ್ಸವ ನಡೆಸುವ ಕುರಿತು ನಟಿ ಶ್ರೀನಿಧಿ ಶೆಟ್ಟಿ ಹರಕೆ ಹೊತ್ತಿಕೊಂಡಿದ್ದರು ಎನ್ನಲಾಗಿದೆ.
ಜಾರಂದಾಯ ಮತ್ತು ಪರಿವಾರ ದೇವ ಗಳಿಗೆ ನಡೆದ ನೇಮೋತ್ಸವದಲ್ಲಿ ಶ್ರೀನಿಧಿ ಶೆಟ್ಟಿ ಕುಟುಂಬ ವರ್ಗದವರು ಮತ್ತು ಸಂಬಂಧಿಕರು ಕೂಡಾ ಪಾಲ್ಗೊಂಡಿದ್ದರು.
- Advertisement -