Sunday, May 5, 2024
Homeತಾಜಾ ಸುದ್ದಿಕಳ್ಳಬಟ್ಟಿ ಅಡ್ಡೆಗೆ ಪೊಲೀಸ್ ದಾಳಿ: ನಟಿ ಮತ್ತು ಆಕೆಯ 4ನೇ ಗಂಡನ ಬಂಧನ

ಕಳ್ಳಬಟ್ಟಿ ಅಡ್ಡೆಗೆ ಪೊಲೀಸ್ ದಾಳಿ: ನಟಿ ಮತ್ತು ಆಕೆಯ 4ನೇ ಗಂಡನ ಬಂಧನ

spot_img
- Advertisement -
- Advertisement -

ತಿರುವನಂತಪುರಂ: ಮಲೆಯಾಳಂನ ಖ್ಯಾತ ಸಿರೀಯಲ್​ ನಟಿ ಮತ್ತು ರಂಗಭೂಮಿ ಕಲಾವಿದೆ ಮಂಜು ಸಿನಿ ಕಳ್ಳಬಟ್ಟಿ ದಂದೆಯನ್ನು ಮಾಡಿ ಜೈಲು ಪಾಲಾಗಿದ್ದಾಳೆ. ಅಚ್ಚರಿ ಎಂದರೆ ಇವರು ಕಳ್ಳಬಟ್ಟಿ ದಂದೆ ನಡೆಸುತ್ತಿದ್ದಿದ್ದು ತನ್ನ 4ನೇ ಗಂಡನ ಜೊತೆ. ಈ ವಿಚಾರ ತಿಳಿದು ಕೇರಳದ ಪೊಲೀಸರು ನಟಿ ಮಂಜು ಮತ್ತು ಆಕೆಯ 4ನೇ ಗಂಡನನ್ನು ಜೈಲಿಗೆ ಅಟ್ಟಿದ್ದಾರೆ.

ಕಳೆದ ಒಂದುವರೆ ತಿಂಗಳಿನಿಂದ ಮಂಜು ಸಿನಿ (42 ವರ್ಷ) ಮತ್ತು ಆಕೆಯ ಗಂಡ ವಿಶಾಖ (28 ವರ್ಷ) ಸಾವಿರಾರು ಲೀಟರ್​​ ಕಳ್ಳಬಟ್ಟಿ ಸಾರಾಯಿ ಸರಬರಾಜು ಮಾಡಿ ಲಕ್ಷಗಟ್ಟಲೆ ಹಣ ಸಂಪಾದಿಸಿದ್ದರಂತೆ. ಅಕ್ರಮವಾಗಿ ದಂದೆ ನಡೆಸುತ್ತಿದ್ದ ವಿಚಾರವನ್ನು ತಿಳಿದು ಅಬಕಾರಿ ಇಲಾಖೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಇವರಿಬ್ಬರನ್ನು ಬಂಧಿಸಿದ್ದಾರೆ.

ಜೊತೆಗೆ ಸುಮಾರು 400 ಲೀಟರ್​​ ಸಾರಾಯಿ ಮತ್ತು ಅದನ್ನು ತಯಾರಿಸಲು ಬಳಸುತ್ತಿದ್ದ ದ್ರವವನ್ನು ವಶಪಡಿಸಿಕೊಂಡಿದ್ದಾರೆ. ನಟಿ ಮಂಜು ಸಿನಿ ಮತ್ತು ವಿಶಾಖ ಕಳ್ಳಬಟ್ಟಿ ತಯಾರಿಸಲು ಬಟ್ಟೆಗೆ ಶುಚಿ ಮಾಡಲು ಬಳಸುತ್ತಿದ್ದ ಸೋಪ್​ ಆಯಿಲ್​ ಮತ್ತು ತಾಜ್ಯಗಳನ್ನು ಬಳಸುತ್ತಿದ್ದರು ಎಂದು ತಿಳಿದುಬಂದಿದೆ.

ನಟಿ ಮಂಜುಗೆ ವಿಶಾಖ 4ನೇ ಪತಿಯಾಗಿದ್ದಾರೆ. ಎರಡು ವರ್ಷಗಳ ಹಿಂದೆ ವಿಶಾಖ ಮರ್ಡರ್​​ ಕೇಸಿಗೆ ಸಂಭಂದಿಸಿದಂತೆ ಬಂಧಿತನಾಗಿದ್ದರು. ಜೈಲಿನಿಂದ ಹೊರಬಂದ ನಂತರ ಮಂಜು ಜೊತೆ ಸೇರಿ ಬಟ್ಟಿ ಸಾರಾಯಿ ದಂದೆಯನ್ನು ಪ್ರಾರಂಭಿಸಿದರು.

ಲಾಕ್​ಡೌನ್​ ಅವಧಿಯಲ್ಲಂತೂ ಬಾರ್​ ತೆರೆಯದೇ ಇದ್ದ ಕಾರಣ ಕಳ್ಳಬಟ್ಟಿಗೆ ಹೆಚ್ಚಿನ ಬೇಡಿಕೆ ಇತ್ತು. ಹಾಗಾಗಿ ಮತ್ತಷ್ಟು ಹೆಚ್ಚಿನ ಹಣಗಳಿಸಿದ್ದರು. ಸದ್ಯ ಅಕ್ರಮ ದಂದೆ ವಾಸನೆ ತಿಳಿದ ಪೊಲೀಸರು ನಟಿ ಮಂಜು ಮತ್ತು ಪತಿ ವಿಶಾಖರನ್ನು ಜೈಲಿಗಟ್ಟಿದ್ದಾರೆ.

- Advertisement -
spot_img

Latest News

error: Content is protected !!