ತಿರುವನಂತಪುರಂ: ಮಲೆಯಾಳಂನ ಖ್ಯಾತ ಸಿರೀಯಲ್ ನಟಿ ಮತ್ತು ರಂಗಭೂಮಿ ಕಲಾವಿದೆ ಮಂಜು ಸಿನಿ ಕಳ್ಳಬಟ್ಟಿ ದಂದೆಯನ್ನು ಮಾಡಿ ಜೈಲು ಪಾಲಾಗಿದ್ದಾಳೆ. ಅಚ್ಚರಿ ಎಂದರೆ ಇವರು ಕಳ್ಳಬಟ್ಟಿ ದಂದೆ ನಡೆಸುತ್ತಿದ್ದಿದ್ದು ತನ್ನ 4ನೇ ಗಂಡನ ಜೊತೆ. ಈ ವಿಚಾರ ತಿಳಿದು ಕೇರಳದ ಪೊಲೀಸರು ನಟಿ ಮಂಜು ಮತ್ತು ಆಕೆಯ 4ನೇ ಗಂಡನನ್ನು ಜೈಲಿಗೆ ಅಟ್ಟಿದ್ದಾರೆ.
ಕಳೆದ ಒಂದುವರೆ ತಿಂಗಳಿನಿಂದ ಮಂಜು ಸಿನಿ (42 ವರ್ಷ) ಮತ್ತು ಆಕೆಯ ಗಂಡ ವಿಶಾಖ (28 ವರ್ಷ) ಸಾವಿರಾರು ಲೀಟರ್ ಕಳ್ಳಬಟ್ಟಿ ಸಾರಾಯಿ ಸರಬರಾಜು ಮಾಡಿ ಲಕ್ಷಗಟ್ಟಲೆ ಹಣ ಸಂಪಾದಿಸಿದ್ದರಂತೆ. ಅಕ್ರಮವಾಗಿ ದಂದೆ ನಡೆಸುತ್ತಿದ್ದ ವಿಚಾರವನ್ನು ತಿಳಿದು ಅಬಕಾರಿ ಇಲಾಖೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಇವರಿಬ್ಬರನ್ನು ಬಂಧಿಸಿದ್ದಾರೆ.
ಜೊತೆಗೆ ಸುಮಾರು 400 ಲೀಟರ್ ಸಾರಾಯಿ ಮತ್ತು ಅದನ್ನು ತಯಾರಿಸಲು ಬಳಸುತ್ತಿದ್ದ ದ್ರವವನ್ನು ವಶಪಡಿಸಿಕೊಂಡಿದ್ದಾರೆ. ನಟಿ ಮಂಜು ಸಿನಿ ಮತ್ತು ವಿಶಾಖ ಕಳ್ಳಬಟ್ಟಿ ತಯಾರಿಸಲು ಬಟ್ಟೆಗೆ ಶುಚಿ ಮಾಡಲು ಬಳಸುತ್ತಿದ್ದ ಸೋಪ್ ಆಯಿಲ್ ಮತ್ತು ತಾಜ್ಯಗಳನ್ನು ಬಳಸುತ್ತಿದ್ದರು ಎಂದು ತಿಳಿದುಬಂದಿದೆ.
ನಟಿ ಮಂಜುಗೆ ವಿಶಾಖ 4ನೇ ಪತಿಯಾಗಿದ್ದಾರೆ. ಎರಡು ವರ್ಷಗಳ ಹಿಂದೆ ವಿಶಾಖ ಮರ್ಡರ್ ಕೇಸಿಗೆ ಸಂಭಂದಿಸಿದಂತೆ ಬಂಧಿತನಾಗಿದ್ದರು. ಜೈಲಿನಿಂದ ಹೊರಬಂದ ನಂತರ ಮಂಜು ಜೊತೆ ಸೇರಿ ಬಟ್ಟಿ ಸಾರಾಯಿ ದಂದೆಯನ್ನು ಪ್ರಾರಂಭಿಸಿದರು.
ಲಾಕ್ಡೌನ್ ಅವಧಿಯಲ್ಲಂತೂ ಬಾರ್ ತೆರೆಯದೇ ಇದ್ದ ಕಾರಣ ಕಳ್ಳಬಟ್ಟಿಗೆ ಹೆಚ್ಚಿನ ಬೇಡಿಕೆ ಇತ್ತು. ಹಾಗಾಗಿ ಮತ್ತಷ್ಟು ಹೆಚ್ಚಿನ ಹಣಗಳಿಸಿದ್ದರು. ಸದ್ಯ ಅಕ್ರಮ ದಂದೆ ವಾಸನೆ ತಿಳಿದ ಪೊಲೀಸರು ನಟಿ ಮಂಜು ಮತ್ತು ಪತಿ ವಿಶಾಖರನ್ನು ಜೈಲಿಗಟ್ಟಿದ್ದಾರೆ.