Friday, June 27, 2025
Homeಅಪರಾಧಪೊಲೀಸಿರಿಂದ ನಟ ದರ್ಶನ್‌ ಗ್ಯಾಂಗ್‌ನ ಮೊಬೈಲ್‌ ರಿಟ್ರೈವ್‌; ಪವಿತ್ರಾ ಗೌಡ ಸೇರಿದಂತೆ ಹಲವು ನಟಿಯರಿಗೆ ಕಳುಹಿಸಿದ್ದ ಅಶ್ಲೀಲ...

ಪೊಲೀಸಿರಿಂದ ನಟ ದರ್ಶನ್‌ ಗ್ಯಾಂಗ್‌ನ ಮೊಬೈಲ್‌ ರಿಟ್ರೈವ್‌; ಪವಿತ್ರಾ ಗೌಡ ಸೇರಿದಂತೆ ಹಲವು ನಟಿಯರಿಗೆ ಕಳುಹಿಸಿದ್ದ ಅಶ್ಲೀಲ ಮೆಸೇಜ್ ಲಭ್ಯ

spot_img
- Advertisement -
- Advertisement -

ಬೆಂಗಳೂರು: ನಟ ದರ್ಶನ್‌ ಸೇರಿ 17 ಮಂದಿ ಆರೋಪಿಗಳ ವಿರುದ್ಧ ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ತಾಂತ್ರಿಕ ಸಾಕ್ಷ್ಯ ಕಲೆ ಹಾಕುತ್ತಿರುವ ಪೊಲೀಸರು, ಆರೋಪಿಗಳ ಮೊಬೈಲ್‌ ಹಾಗೂ ಸಿಸಿಟೀವಿ ಡಿವಿಆರ್‌ನಿಂದ ಅಳಿಸಿ ಹಾಕಿದ್ದ ದತ್ತಾಂಶವನ್ನು ಮರು ಸಂಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.

ಹೊಸ ಸಿಮ್‌ಕಾರ್ಡ್‌ ಅನ್ನು ಆರೋಪಿಗಳ ಹೆಸರಿನಲ್ಲಿ ಪಡೆದುಕೊಂಡು, ಅವರ ಮೊಬೈಲ್‌ನಲ್ಲಿದ್ದ ಪ್ರಕರಣ ಕುರಿತು ಎಲ್ಲಾ ದತ್ತಾಂಶಗಳನ್ನು ಸಂಗ್ರಹಿಸಿದ್ದಾರೆ. ಅಲ್ಲದೆ, ಕೊಲೆ ಮಾಡಿದ ಬಳಿಕ ಆರೋಪಿಗಳು ರೇಣುಕಸ್ವಾಮಿ ಮೊಬೈಲ್‌ ಅನ್ನು ನಾಶಪಡಿಸಿದ್ದರು. ಹೀಗಾಗಿ ಆತನ ಹೆಸರನಲ್ಲೂ ಸಿಮ್‌ ಪಡೆದು ರೇಣುಕಸ್ವಾಮಿ ಬಳಸುತ್ತಿದ್ದ ಇನ್‌ಸ್ಟ್ರಾಗ್ರಾಂ ಹಾಗೂ ವಾಟ್ಸ್‌ಆ್ಯಪ್‌ ಖಾತೆಗಳನ್ನು ರಿಟ್ರೈವ್‌ ಮಾಡಿ ಎಲ್ಲಾ ದತ್ತಾಂಶವನ್ನು ಮರು ಸಂಗ್ರಹಿಸಿದ್ದಾರೆ. ಈ ವೇಳೆ ರೇಣುಕಸ್ವಾಮಿ, ಪವಿತ್ರಾಗೌಡ ಹಾಗೂ ಕೆಲ ನಟಿಯರು, ಯುವತಿಯರಿಗೆ ಕಳುಹಿಸಿರುವ ಅಶ್ಲೀಲ ಸಂದೇಶಗಳನ್ನು ದೊರಕಿವೆ ಎಂದು ಮೂಲಗಳು ಹೇಳಿವೆ.

ಜೂನ್‌ 8 ರಿಂದ 10ರವರೆಗೆ ದರ್ಶನ್‌ ಅವರ ಚಲನವಲನಗಳ ದೃಶ್ಯಗಳನ್ನು ಅವರ ಮನೆಯ ಸಿಸಿ ಕ್ಯಾಮೆರಾ ಡಿವಿಆರ್‌ನಿಂದ ಮರುಸಂಗ್ರಹಿಸಲಾಗಿದೆ. ಹತ್ಯೆಗೆ ಬಳಸಿದ್ದ ಮೆಗ್ಗರ್‌ ಉಪಕರಣವನ್ನು ಧನರಾಜ್‌ ಎಂಬಾತ ಆನ್‌ಲೈನ್‌ ಮೂಲಕ ಆರ್ಡರ್‌ ಮಾಡಿದ್ದು, ಅದನ್ನು ತಂದುಕೊಟ್ಟಿದ್ದ ಡೆಲಿವರಿ ಬಾಯ್‌ ನನ್ನು ಸಹ ವಿಚಾರಣೆ ನಡೆಸಿ, ಹೇಳಿಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

- Advertisement -
spot_img

Latest News

error: Content is protected !!