- Advertisement -
- Advertisement -
ಮೈಸೂರು:ಇಂದು ಮೈಸೂರಿನಲ್ಲಿ ಎಸಿಎಫ್ ಶಿವಶಂಕರ್ ಅವರ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹದಳ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಈ ಅಧಿಕಾರಿ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದರು ಎಂಬ ಆರೋಪದ ಮೇಲೆ ಶಿವಶಂಕರ್ ಅವರಿಗೆ ಸೇರಿದ ಮನೆ ಸೇರಿದಂತೆ ಒಟ್ಟು 5 ಕಡೆ ಏಕಕಾಲದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆದಿದೆ.
ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.ಶಿವಶಂಕರ್ ಅವರ ಮೈಸೂರಿನ ನಜರಾಬಾದ್, ಸರಸ್ವತಿಪುರಂ, ಜೆಸಿ ಬಡಾವಣೆ, ಮಳವಳ್ಳಿ ಸೇರಿದಂತೆ ಒಟ್ಟು ಐದು ಕಡೆ ಆಸ್ತಿಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು ತನಿಖೆ ಮುಂದುವರಿದಿದೆ.
- Advertisement -