Saturday, May 4, 2024
Homeಕರಾವಳಿಬೆಂಗಳೂರಿನಲ್ಲಿ ಸೈಕಲಿಗೆ ಕಾರು ಡಿಕ್ಕಿ, ಬಂಟ್ವಾಳದ ಯುವಕ ಸಾವು

ಬೆಂಗಳೂರಿನಲ್ಲಿ ಸೈಕಲಿಗೆ ಕಾರು ಡಿಕ್ಕಿ, ಬಂಟ್ವಾಳದ ಯುವಕ ಸಾವು

spot_img
- Advertisement -
- Advertisement -

ಬಂಟ್ವಾಳ : ಬೆಂಗಳೂರಿನ ಯಲಹಂಕದಲ್ಲಿ ಸೈಕಲಿಗೆ ಹಿಂದಿನಿಂದ ಕಾರು ಢಿಕ್ಕಿಯಾಗಿ ಸೈಕಲ್‌ ಸವಾರ ಬಂಟ್ವಾಳ ಮೂಲದ ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ.

ಬಂಟ್ವಾಳ ಕಾಮಾಜೆ ನಿವಾಸಿ ಶಿವಪ್ರಸಾದ್ (33) ಮೃತಪಟ್ಟ ಯುವಕ. ಬೆಂಗಳೂರಿನ ಎಸಿ ಟೆಕ್ನೀಷಿಯನ್‌ ಆಗಿದ್ದ ಶಿವಪ್ರಸಾದ್‌ ಅವರು ತನ್ನ ಕಾಟ್ರಸ್‌ ನಿಂದ 250 ಮೀ.ದೂರದಲ್ಲಿರುವ ಕಚೇರಿಗೆ ಹೋಗುವ ವೇಳೆ ಸೈಕಲ್‌ ಗೆ ಹಿಂದಿನಿಂದ ಮಹಿಳೆ ಚಲಾಯಿಸುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ.

ಈ ವೇಳೆ ಶಿವಪ್ರಸಾದ್‌ ಅವರು ಡಿವೈರ್ಡ ಗೆ ಬಿದ್ದು ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಕಳೆದ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅವರಿಗೆ ನಾಲ್ಕೆಂದು ವರ್ಷಗಳ ಹಿಂದೆ ಉದ್ಯೋಗ ಲಭಿಸಿತ್ತು. ಮೂಲತಃ ರಾಯಿಯಲ್ಲಿ ವಾಸವಿದ್ದ ಅವರ ಕುಟುಂಬ ಬಳಿಕ ಕಳೆದ 10 ವರ್ಷಗಳಿಂದ ಕಾಮಾಜೆಯಲ್ಲಿ ನೆಲೆಸಿತ್ತು. ಕಳೆದ 5 ತಿಂಗಳ ಹಿಂದೆಯಷ್ಟೇ ಅವರಿಗೆ ವಿವಾಹವಾಗಿತ್ತು. ಶಿವಪ್ರಸಾದ್‌ ಅವರ ಮೃತದೇಹವನ್ನು ಊರಿಗೆ ತಂದು ಬಂಟ್ವಾಳದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

- Advertisement -
spot_img

Latest News

error: Content is protected !!