- Advertisement -
- Advertisement -
ಮಂಗಳೂರು: ಟಿಪ್ಪರ್ ಹರಿದು 6 ವರ್ಷದ ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ಮಂಗಳೂರಿನ ಬಜಾಲ್ ಜಲ್ಲಿಗುಡ್ಡೆ ಸಮೀಪದ ಕಟ್ಟಪುಣಿಯ ಕೋರ್ದಬ್ಬು ದೇವಸ್ಥಾನದ ಬಳಿ ನಡೆದಿದೆ.
ಇಲ್ಲಿನ ನಿವಾಸಿ ಹಿದಾಯುತ್ತಲ್ಲಾ ಎಂಬವರ ಪುತ್ರ ಜೀಶನ್(6) ಮೃತ ದುರ್ದೈವಿ. ಜೀಶನ್ ಇನ್ನೋರ್ವ ಬಾಲಕನ ಜೊತೆ ಸೈಕಲ್ ನಲ್ಲಿ ಅಂಗಡಿಗೆ ಬಂದಿದ್ದಾನೆ. ಈ ವೇಳೆ ಸೈಕಲ್ ಗೆ ಟಿಪ್ಪರ್ ಡಿಕ್ಕಿಯಾಗಿದೆ. ಪರಿಣಾಮ ಕೆಳಗೆ ಬಿದ್ದ ಜೀಶನ್ ಮೇಲೆ ಟಿಪ್ಪರ್ ಹರಿದು ಆತ ಸಾವನ್ನಪ್ಪಿದ್ದಾನೆ. ಘಟನೆ ನಡೆಯುತ್ತಿದ್ದಂತೆ ಟಿಪ್ಪರ್ ಚಾಲಕ ಅಬೂಬಕರ್ ಟಿಪ್ಪರ್ ಬಿಟ್ಟು ಪರಾರಿಯಾಗಿದ್ದಾನೆ.ಈ ಬಗ್ಗೆ ಕಂಕನಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -