Monday, June 8, 2026
Homeಕರಾವಳಿಚಾರ್ಮಾಡಿಯ ಅಂತರದ ಜಲಾವೃತ ಪ್ರದೇಶಕ್ಕೆ ಪುತ್ತೂರು ಎಸಿ ಹಾಗೂ ಬೆಳ್ತಂಗಡಿ ತಹಶೀಲ್ದಾರ್ ಭೇಟಿ

ಚಾರ್ಮಾಡಿಯ ಅಂತರದ ಜಲಾವೃತ ಪ್ರದೇಶಕ್ಕೆ ಪುತ್ತೂರು ಎಸಿ ಹಾಗೂ ಬೆಳ್ತಂಗಡಿ ತಹಶೀಲ್ದಾರ್ ಭೇಟಿ

- Advertisement -
- Advertisement -

ಬೆಳ್ತಂಗಡಿ :  ತಾಲೂಕಿನ ಚಾರ್ಮಾಡಿಯ ಅಂತರ‌ದಲ್ಲಿ ಜಲಾವೃತ ಪ್ರದೇಶಕ್ಕೆ ಪುತ್ತೂರು ಎ.ಸಿ ಯತೀಶ್ ಉಳ್ಳಾಲ್ ,ಬೆಳ್ತಂಗಡಿ ತಹಶೀಲ್ದಾರ್ ಮಹೇಶ್.ಜೆ‌, ಎಮ್.ಎಲ್.ಸಿ ಹರೀಶ್ ಕುಮಾರ್‌ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸ್ಥಳೀಯ ನಿವಾಸಿಗಳಿಗೆ ಎಸಿ ಹಾಗೂ ತಹಶೀಲ್ದಾರ್ ತಿಳಿಸಿದ್ರು. ಇನ್ನು ಕಳೆದ ವರ್ಷವೇ ಸರ್ಕಾರ ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿತ್ತು. ಆದ್ರೆ ಭರವಸೆ ಭರವಸೆಯಾಗಿಯೇ ಉಳಿದಿದೆ ಎಂದು ಸ್ಥಳೀಯರು ಇದೇ ವೇಳೆ ತಿಳಿಸಿದ್ರು. ಇನ್ನು  ಅಂತರದ ಸಂಪರ್ಕ ಸೇತುವೆ ಅಗಲೀಕರಿಸಲು ಇದೇ ವೇಳೆ ಸ್ಥಳೀಯರು ಮನವಿ ಮಾಡಿದರು.

ಅಲ್ಲದೇ ಪುತ್ತೂರು ಎ.ಸಿ. ಯತೀಶ್ ಉಳ್ಳಾಲ್ ಮತ್ತು ಬೆಳ್ತಂಗಡಿ ತಹಶೀಲ್ದಾರ್ ಮಹೇಶ್. ಜೆ ಬೆಳ್ತಂಗಡಿ ಜನರ ಸಮಸ್ಯೆಗೆ ತಕ್ಷಣಕ್ಕೆ ಸ್ಪಂದಿಸುತ್ತಿದ್ದು, ಇದಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಚಾರ್ಮಾಡಿಯ‌ ಅಂತರದಲ್ಲಿ ನೀರು ಬಂದ ಪ್ರದೇಶಕ್ಕೆ ಪುತ್ತೂರು ಎ.ಸಿ ಯತೀಶ್ ಉಳ್ಳಾಲ್ ,ಬೆಳ್ತಂಗಡಿ ತಹಶೀಲ್ದಾರ್ ಮಹೇಶ್.ಜೆ‌ ಭೇಟಿ

Posted by Maha Xpress on Saturday, 8 August 2020

- Advertisement -

Latest News

error: Content is protected !!