Friday, June 27, 2025
Homeತಾಜಾ ಸುದ್ದಿರಸ್ತೆ ರಿಪೇರಿಯಾಗೋವರೆಗೂ ಮದುವೆ ಆಗಲ್ಲ ಎಂದು ಶಿಕ್ಷಿಕಿ ಶಪಥ ; ಸುದ್ದಿ ಮಾಧ್ಯಮಗಳಲ್ಲಿ ಪ್ರಚಾರವಾಗುತ್ತಿದ್ದಂತೆ...

ರಸ್ತೆ ರಿಪೇರಿಯಾಗೋವರೆಗೂ ಮದುವೆ ಆಗಲ್ಲ ಎಂದು ಶಿಕ್ಷಿಕಿ ಶಪಥ ; ಸುದ್ದಿ ಮಾಧ್ಯಮಗಳಲ್ಲಿ ಪ್ರಚಾರವಾಗುತ್ತಿದ್ದಂತೆ ಜಿಲ್ಲಾಧಿಕಾರಿ ಗ್ರಾಮಕ್ಕೆ ದೌಡು !

spot_img
- Advertisement -
- Advertisement -

ದಾವಣಗೆರೆ: ತಾಲೂಕಿನ ಎಚ್.ರಾಂಪುರ ಗ್ರಾಮದ ಆರ್.ಡಿ. ಬಿಂದು ಎಂಬ ಶಿಕ್ಷಕಿ ತಮ್ಮೂರಿಗೆ ಹೋಗಲು ರಸ್ತೆ ನಿರ್ಮಾಣವಾಗಿ, ಬಸ್ ಸೌಲಭ್ಯ ಕಲ್ಪಿಸುವವರೆಗೆ ಮದುವೆಯಾಗುವುದಿಲ್ಲ ಎಂದು ಶಪಥ ಮಾಡಿದ್ದು , ಈ ಕುರಿತು ಮಾಧ್ಯಮಗಳಲ್ಲಿ ಪ್ರಚಾರವಾಗುತ್ತಿದ್ದಂತೆ ದಾವಣಗೆರೆ ಜಿಲ್ಲಾಧಿಕಾರಿ ಗ್ರಾಮಕ್ಕೆ ಇಂದು ದೌಡಾಯಿಸಿದ್ದಾರೆ.

ಆ ಊರಿಗೆ ತೆರಳಲು ರಸ್ತೆಯೇ ಇಲ್ಲ, ಇನ್ನು ಬಸ್ ಸಂಚಾರ ಅಂತೂ ಕನಸಿನ ಮಾತಾಗಿದೆ. ಇಲ್ಲಿನ ಬಹುತೇಕ ಜನರು ಶಿಕ್ಷಣದಿಂದ ವಂಚಿತರಾಗಲು ಇದೆ ಕಾರಣ. ಎಚ್.ರಾಂಪುರದಿಂದ ಹೆದ್ನೆ ಗ್ರಾಮದವರೆಗೆ 5 ಕಿ.ಮೀ. ಅಂತರವಿದ್ದು, 2 ಕಿ.ಮೀ. ವರೆಗೆ ಮಾತ್ರ ರಸ್ತೆ ನಿರ್ಮಾಣವಾಗಿದೆ. ಅದೂ ಕೂಡ ಸುಸ್ಥಿತಿಯಲ್ಲಿಲ್ಲ. ಇನ್ನೂ 3 ಕಿ.ಮೀ. ರಸ್ತೆ ಅಭಿವೃದ್ಧಿಯಾಗಬೇಕಿದೆ. ಈ ಬೇಡಿಕೆಯೊಂದಿಗೆ ಗ್ರಾಮದ ಜನರು 3 ಚುನಾವಣೆಗಳಲ್ಲಿ ಮತದಾನ ಬಹಿಷ್ಕಾರ ಮಾಡಿದ್ದರು. ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಖಾಸಗಿ ಶಾಲೆಯ ಶಿಕ್ಷಕಿಯಾಗಿರುವ ಬಿಂದು ವಿವರಿಸಿದ್ದರು.

ಶಿಕ್ಷಕಿ ಬಿಂದು ಅವರಿಗೆ ಎರಡು ಬಾರಿ ನೋಡಲು ಬಂದಿದ್ದ ವರನ ಕಡೆಯವರು ರಸ್ತೆ ಸರಿ ಇಲ್ಲ ಎಂಬ ಕಾರಣಕ್ಕೆ ಮದುವೆಗೆ ಒಪ್ಪಿರಲಿಲ್ಲ. ಇದರಿಂದ ಬೇಸತ್ತಿದ್ದ ಬಿಂದು ಅವರು, ಶಪಥ ಮಾಡಿದ್ದರು. ರಸ್ತೆ ರಿಪೇರಿ ಆಗುವವರೆಗೂ ತಾವು ಮದುವೆಯಾಗುವುದಿಲ್ಲ ಎಂದಿದ್ದರು. ಬರಿ ಬಿಂದು ಅಷ್ಟೇ ಅಲ್ಲದೆ ಇತರ ಹೆಣ್ಣು ಮಕ್ಕಳೀಗೂ ಇದೆ ಸಮಸ್ಯೆಯಾಗಿದೆ. ರಸ್ತೆಯ ಕಾರಣಕ್ಕೆ ಈ ಗ್ರಾಮಕ್ಕೆ ಹೆಣ್ಣು ಕೊಡುವುದು, ಇಲ್ಲಿಯ ಹೆಣ್ಣನ್ನು ಮದುವೆಯಾಗಲು ಹಿಂಜರಿಯುತ್ತಿದ್ದಾರೆ. ಈ ಕಾರಣಕ್ಕಾಗಿ ಗ್ರಾಮಸ್ಥರೂ ಕೂಡ ಬಿಡುವಿನ ನಿಲುವಿಗೆ ನೈತಿಕ ಬೆಂಬಲ ಸೂಚಿಸಿದ್ದರು.ಈ ಬೇಡಿಕೆಯೊಂದಿಗೆ ಗ್ರಾಮದ ಜನರು 3 ಚುನಾವಣೆಗಳಲ್ಲಿ ಮತದಾನ ಬಹಿಷ್ಕಾರ ಮಾಡಿದ್ದರು.

ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ಮೂಲಕ ತಿಳಿಸಿದ್ದರು. ಕಳೆದ ವರ್ಷ ಪ್ರಧಾನಿ ಮೋದಿ ಅವರಿಗೂ ಬಿಂದು ಪತ್ರ ಬರೆದಿದ್ದರಂತೆ. ಆದರೆ ಏನೂ ಪ್ರಯೋಜನವಾಗಲಿಲ್ಲ ಎನ್ನುವುದು ಗ್ರಾಮಸ್ಥರ ದೂರು.

ಬಿಂದು ಅವರು ಮಾಡಿರುವ ಶಪಥದ ಕುರಿತು ಮಾಧ್ಯಮಗಳಲ್ಲಿ ಪ್ರಚಾರ ಆಗುತ್ತಿದ್ದಂತೆಯೇ ದಾವಣಗೆರೆ ಜಿಲ್ಲಾಧಿಕಾರಿ ಗ್ರಾಮಕ್ಕೆ ಇಂದು ದೌಡಾಯಿಸಿದ್ದಾರೆ. ಜಿಲ್ಲಾಧಿಕಾರಿ ಮಹಾಂತೇಶ್ ಹಾಗೂ ಅಧಿಕಾರಿ ಆರ್. ಬೀಳಗಿ ಎಚ್. ರಾಂಪುರ ಗ್ರಾಮಕ್ಕೆ ಅಧಿಕಾರಿಗಳ ಜತೆ ಭೇಟಿ ನೀಡಿ ಗ್ರಾಮಸ್ಥರ ಸಂಕಷ್ಟ ಆಲಿಸಿದ್ದಾರೆ. ಅಷ್ಟೇ ಅಲ್ಲದೇ, ರಸ್ತೆ ನಿರ್ಮಾಣ ಮಾಡಿಕೊಡುವ ಭರವಸೆಯನ್ನು ಜಿಲ್ಲಾಧಿಕಾರಿಗಳು ನೀಡಿದರು. ಇದೇ ಸಂದರ್ಭದಲ್ಲಿ ಕಾಡು ಪ್ರಾಣಿಗಳ ಕಾಟ, ನೆಟ್‌ವರ್ಕ್ ತೊಂದರೆ, ಗುಡ್ಡಗಾಡು ಪ್ರದೇಶದ ಸಂಕಷ್ಟಗಳು, ರಸ್ತೆ ಹಾಳಾಗಿರುವುದು, ಬಸ್ ಬಾರದಿರುವುದೂ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಒಟ್ಟಿನಲ್ಲಿ ಶಿಕ್ಷಕಿಯ ಶಪಥ ಸ್ವಲ್ಪ ಮಟ್ಟಿಗಾದರೂ ಕೆಲಸ ಮಾಡಿದ್ದು, ಗ್ರಾಮದ ಉದ್ಧಾರಕ್ಕೆ ಮುನ್ನಡಿ ಬರೆದಿದೆ ಎಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

- Advertisement -
spot_img

Latest News

error: Content is protected !!