Saturday, May 18, 2024
Homeಕರಾವಳಿಉಡುಪಿಕಾಪು : ಸೇತುವೆ ಮೇಲೆ ಸ್ಕೂಟರ್ ನಿಲ್ಲಿಸಿ ಯುವಕ ನಾಪತ್ತೆ: ಇನ್ನೂ ಸಿಗದ ಸುಳಿವು: ಇವತ್ತೂ...

ಕಾಪು : ಸೇತುವೆ ಮೇಲೆ ಸ್ಕೂಟರ್ ನಿಲ್ಲಿಸಿ ಯುವಕ ನಾಪತ್ತೆ: ಇನ್ನೂ ಸಿಗದ ಸುಳಿವು: ಇವತ್ತೂ ಮುಂದುವರಿದ ಶೋಧ

spot_img
- Advertisement -
- Advertisement -

ಕಾಪು: ಜೂನ್ ಆರರಂದು ನಾಪತ್ತೆಯಾಗಿರುವ ದೆಂದೂರುಕಟ್ಟೆ ಸಮೃದ್ಧಿ ನಗರದ ಯುವಕ ಪುನೀತ್ ಎಂಬಾತನ ಪತ್ತೆಗಾಗಿ ಕಾಪು ಪೊಲೀಸರು, ಜಿಲ್ಲಾ ಅಗ್ನಿಶಾಮಕದಳ, ಮುಳುಗು ತಜ್ಞ ಈಶ್ವರ್ ಮಲ್ಪೆ ಪ್ರವೀಣ್‌ ಕುಮಾರ್‌ ಕುರ್ಕಾಲು ಮತ್ತು ತಂಡ ಶೋಧ ನಡೆಸುತ್ತಿದೆ.

ಜು.6ರಂದು ಈ ಯುವಕನ ಸ್ಕೂಟರ್ ಅಲೆವೂರು ದೆಂದೂರುಕಟ್ಟೆ ಸೇತುವೆಯ ಮೇಲೆ ಇರಿಸಿದ ಸ್ಥಿತಿಯಲ್ಲಿ ಕಂಡು ಬಂದಿದ್ದು, ಹೊಳೆಗೆ ಹಾರಿರಬಹುದು ಎಂದು ಶಂಕಿಸಲಾಗಿತ್ತು. ದ್ವಿಚಕ್ರ ವಾಹನದಲ್ಲಿ ಆಧಾರ್ ಕಾರ್ಡ್ ಹಾಗೂ ವಾಹನದ ಬೀಗವೂ ಅದರಲ್ಲೇ ಕಂಡು ಬಂದಿತ್ತು.

ಬಳಿಕ ನಾಪತ್ತೆಯಾಗಿರಿವ ಈ ಯುವಕನ ಬಗ್ಗೆ ಯಾವುದೇ ಸುಳಿವು ಪತ್ತೆಯಾಗದೆ ಮನೆಮಂದಿ ಚಿಂತಿತರಾಗಿದ್ದರು. ಈ ಬಗ್ಗೆ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಈತನ ಮನೆಗೆ ತೆರಳಿ ಮನೆಮಂದಿಗೆ  ಸಾಂತ್ವನ ನೀಡಿ ಕಾರ್ಯಾಚರಣೆ, ತನಿಖೆಯನ್ನು ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಇದೀಗ ಉದ್ಯಾವರ ಪಾಪನಾಶಿನಿ ಹೊಳೆ, ಮಟ್ಟು ಭಾಗದ ಹೊಳೆಯಲ್ಲಿ ಈತನ ಪತ್ತೆಗಾಗಿ ಅಂದಾಜು 8 ಕಿ. ಮೀ. ಗೂ ಅಧಿಕ ಕ್ರಮಿಸಿ ಶೋಧ ಕಾರ್ಯ ನಡೆಸಿದರೂ ಪತ್ತೆಯಾಗಲಿಲ್ಲ.

- Advertisement -
spot_img

Latest News

error: Content is protected !!