ಬೆಳ್ತಂಗಡಿ: ಸವಣಾಲು ಅನುದಾನಿತ ಹಿ.ಪ್ರಾ ಶಾಲೆಗೆ ರೂ.5 ಲಕ್ಷ ವೆಚ್ಚದಲ್ಲಿ ನೂತನ ಕೊಠಡಿ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಆ.24 ರಂದು ಜರುಗಿತು.
ಬೆಂಗಳೂರಿನ ಇಂಟರ್ನ್ಯಾಷನಲ್ ಟ್ರೈಪಾತ್ ಲಾಜಿಸ್ಟಿಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಬೆಂಗಳೂರು ವತಿಯಿಂದ ಸಿಎಸ್ಆರ್ ಅನುದಾನದಲ್ಲಿ ಸವಣಾಲು ಶ್ರೀ ಲಕ್ಷ್ಮೀ ನಾರಾಯಣ ಎಜ್ಯುಕೇಶನ್ ಸೊಸೈಟಿ ಇದರ ಆಡಳಿತದಲ್ಲಿ ನೂತನ ಕೊಠಡಿ ಶಿಲಾನ್ಯಾಸ ಕಾರ್ಯಕ್ರಮ ನಡೆದಿದೆ.
ಸಂಸ್ಥೆಯ 6 ಮಂದಿ ನಿರ್ದೇಶಕರಲ್ಲಿ ಓರ್ವರಾದ ಸವಣಾಲಿನ ಅಳಿಯ ಹಾಜಿ ಅಬ್ಬಾಸ್ ಖಾನ್, ಅವರ ಪತ್ನಿ, ಶಾಲಾ ಪೂರ್ವ ವಿದ್ಯಾರ್ಥಿನಿ ಜಮೀಲಾ ಮಂಜದಬೆಟ್ಟು ಮತ್ತು ತಾಯಿ ರಹ್ಮತುನ್ನಿಸಾ ರವರು ನೂತನ ಶಿಲಾನ್ಯಾಸ ನೆರವೇರಿಸಿದರು.
ನಂತರ ಮಾತನಾಡಿದ ಅವರು ,ಕಟ್ಟಡ ಪೂರ್ಣಗೊಂಡ ಬಳಿಕ 1ಲಕ್ಷ ರೂ ವೆಚ್ಚದಲ್ಲಿ ಪೂರ್ಣ ಪೀಠೋಪಕರಣಗಳನ್ನೂ ಒದಗಿಸುವ ಭರವಸೆ ನೀಡಿದ್ದು, ಜೊತೆಗೆ ಮೂರು ಲೇಪ್ಟಾಪ್ ಗಳನ್ನು ಕೊಡುಗೆ ನೀಡುವುದಾಗಿ ಘೋಷಿಸಿದ್ದಾರೆ. ಮಂಗಳವಾರ ಒಂದು ಲಾಪ್ಟಾಪ್ ಅನ್ನು ಶಾಲಾ ಮುಖ್ಯ ಶಿಕ್ಷಕ ಮಂಜುನಾಥ ಜಿ ಅವರಿಗೆ ಹಸ್ತಾಂತರಿಸಿದರು.
ಈಸಂದರ್ಭ ಅಬ್ಬಾಸ್ ಖಾನ್ ಅವರ ಪತ್ನಿ ಜಮೀಲಾ ಮಂಜದಬೆಟ್ಟು, ಅವರ ತಾಯಿ ರಹ್ಮತುನ್ನಿಸಾ, ಶಾಲಾ ಸಮಿತಿ ಅಧ್ಯಕ್ಷ ರಘುರಾಮ ಗಾಂಭೀರ ಎಸ್ಡಿಎಂಸಿ ಅಧ್ಯಕ್ಷ ಕೇಶವ ನಾಯ್ಕ, ರಾಜೇಶ್ ಭಟ್, ಜಯಾನಂದ ಪಿಲಿಕಲ, ಸಹಶಿಕ್ಷಿಕಿ ಮಹಾಲಕ್ಷ್ಮೀ ಮೊದಲಾದವರು ಉಪಸ್ಥಿತರಿದ್ದರು.