- Advertisement -
- Advertisement -
ಬ್ರಹ್ಮಾವರದ ಆರೂರು ಕ್ರಾಸ್ ಬಳಿ ತಾಯಿ ಮಗಳು ಸೇರಿ ಮಹಿಳೆಯೊಬ್ಬರಿಗೆ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಈ ಬಗ್ಗೆ ಸರಸ್ವತಿ ಎಂಬವವರು ಪೊಲೀಸರಿಗೆ ದೂರು ನೀಡಿದ್ದಾರೆ.
ಸರಸ್ವತಿ ಅವರು ತಮ್ಮ ಸ್ಕೂಟರ್ ನಲ್ಲಿ ನೀಲಾವರದ ಅವರ ಮನೆಯಿಂದ ಆರೂರು ಕ್ರಾಸ್ ಬಳಿ ತಮ್ಮ ಸ್ಕೂಟರ್ ನಲ್ಲಿ ಹೋಗುತ್ತಿದ್ದರು. ಈ ವೇಳೆ ಅವರ ಪರಿಚಯದ ದೀಪಾ ಶೆಟ್ಟಿ ಹಾಗೂ ಇಂದಿರಾ ಶೆಟ್ಟಿ ಎಂಬವರು ಇವರ ಸ್ಕೂಟರ್ ಅಡ್ಡ ಕಟ್ಟಿ ತಡೆದು ನಿಲ್ಲಿಸಿ ಕತ್ತಿಯಿಂದ ಹಲ್ಲೆ ನಡೆಸಿದ್ದಾರೆ.
ಈ ವೇಳೆ ಸರಸ್ವತಿ ಅವರ ಮನೆಯವರು ಬಂದಿದ್ದು ಆಗ ಆರೋಪಿಗಳು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುವುದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
- Advertisement -