Monday, May 13, 2024
Homeಕರಾವಳಿಉಡುಪಿಸ್ವಾಮಿ ಕೊರಗಜ್ಜನ ನಿಂದನೆ, ಉಡುಪಿ ಜಿಲ್ಲೆಯ ಎಲ್ಲಾ ದೈವಸ್ಥಾನ , ದೇವಸ್ಥಾನಗಳಲ್ಲಿ ಜ .11 ರಂದು...

ಸ್ವಾಮಿ ಕೊರಗಜ್ಜನ ನಿಂದನೆ, ಉಡುಪಿ ಜಿಲ್ಲೆಯ ಎಲ್ಲಾ ದೈವಸ್ಥಾನ , ದೇವಸ್ಥಾನಗಳಲ್ಲಿ ಜ .11 ರಂದು ಸಾಮೂಹಿಕ ಪ್ರಾರ್ಥನೆ, ವಿಶ್ವ ಹಿಂದೂ ಪರಿಷದ್ ಕರೆ

spot_img
- Advertisement -
- Advertisement -

ಉಡುಪಿ: ನಿರಂತರವಾಗಿ ಹಿಂದೂಗಳ ಆರಾಧ್ಯ ದೈವ ದೇವರುಗಳನ್ನು ನಿಂದನೆ ಮಾಡುವುದು , ಅಶ್ಲೀಲ ಚಿತ್ರ ಬಿಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚುವುದು , ಪವಿತ್ರ ನಾಗನ ಕ್ಷೇತ್ರಗಳನ್ನು ಅಪವಿತ್ರಗೊಳಿಸುವುದು, ಕಾಂಡಮ್ ಹಾಕಿ ಅಪವಿತ್ರ ಮಾಡುವುದು ಮತ್ತು ಇದರ ಮುಂದುವರಿದ ಭಾಗವಾಗಿ ಸ್ವಾಮಿ ಕೊರಗಜ್ಜನ ವೇಷ ಹಾಕಿ ಸಂತೋಷ ಪಡುವ ಈ ಎಲ್ಲಾ ಘಟನೆಗಳು ಸಮಸ್ತ ಹಿಂದೂಗಳ ಮನಸ್ಸಿಗೆ ನೆ ಉಂಟು ಮಾಡಿದೆ.

ಈ ಘಟನೆಯನ್ನು ವಿಶ್ವ ಹಿಂದೂ ಪರಿಷದ್ ಬಜರಂಗದಳ ಉಡುಪಿ ಜಿಲ್ಲೆ ತೀವ್ರವಾಗಿ ಖಂಡಿಸುತ್ತದೆ. ಇದು ಇಲ್ಲಿಗೆ ನಿಲ್ಲಬೇಕು. ಮುಂದೆ ಎಂದೂ ನಡೆಯಬಾರದು. ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆಯಾಗಬೇಕೆಂದು ಉಡುಪಿ ಜಿಲ್ಲೆಯ ಎಲ್ಲಾ ದೈವಸ್ಥಾನ , ದೇವಸ್ಥಾನಗಳಲ್ಲಿ ಜ .11 ರಂದು ಸಾಮೂಹಿಕ ಪ್ರಾರ್ಥನೆ ನಡೆಸಲು ಸಮಸ್ತ ಹಿಂದು ಬಂಧುಗಳಲ್ಲಿ ವಿಶ್ವ ಹಿಂದೂ ಪರಿಷದ್ ವಿನಂತಿಸಿದೆಂದು ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

- Advertisement -
spot_img

Latest News

error: Content is protected !!