- Advertisement -
- Advertisement -
ಸುಳ್ಯ: ಉದ್ಯಮಿ ,ಕೃಷಿಕ ರಾಜೇಶ್ ಗುಂಡಿಗದ್ದೆ ಎಂಬವರು ಸೆ.04 ರಂದು ಕಾಣೆಯಾಗಿದ್ದು ಗೋವಾದಲ್ಲಿ ಪತ್ತೆಯಾದ ಘಟನೆ ಸೆ.12 ರಂದು ಸಂಜೆ ನಡೆದಿದೆ. ಮನೆಯಿಂದ ಸುಳ್ಯ ಪೇಟೆಗೆ ಹೋಗಿಬರುವುದಾಗಿ ಹೇಳಿ ಹೋದ ರಾಜೇಶರು ವಾಪಾಸು ಬಾರದೆ ಕಾಣೆಯಾಗಿದ್ದರು. ಈ ಬಗ್ಗೆ ಅವರ ಪತ್ನಿ ಬೆಳ್ಳಾರೆ ಠಾಣೆಯಲ್ಲಿ ದೂರು ನೀಡಿದ್ದರು.
ಇನ್ನು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹುಡುಕಾಟ ಆರಂಭಿಸಿದ್ದರು. ಹಲವು ಕಡೆಗಳಲ್ಲಿ ಹುಡುಕಾಟ ನಡೆಸಿದ್ದರು. ಹಾಗು ರಾಜೇಶರ ಸಂಬಂಧಿಕರು ಕೂಡ ಹುಡುಕಾಟ ನಡೆಸಿದ್ದರು.
ಸೆ.12 ರಂದು ರಾಜೇಶರು ಗೋವಾದಲ್ಲಿರುವುದು ಪೊಲೀಸರಿಗೆ ಗೊತ್ತಾಗಿ ಅವರನ್ನು ಸೆ.13 ರಂದು ಠಾಣೆಗೆ ಕರೆತಂದಿರುವುದಾಗಿ ತಿಳಿದು ಬಂದಿದೆ. ರಾಜೇಶರು ಸಂಪಾಜೆ, ಮಡಿಕೇರಿ ಆಗಿ ಕುಶಾಲನಗರದಿಂದ ಮೈಸೂರಿಗೆ ಹೋಗಿ ಮೈಸೂರಿನಲ್ಲಿ ತನ್ನ ಕಾರನ್ನು ನಿಲ್ಲಿಸಿ ನಂತರ ಅಲ್ಲಿಂದ ಬಸ್ಸಲ್ಲಿ ತಿರುಪತಿಗೆ ಹೋಗಿ ಗೋವಾದಲ್ಲಿದ್ದರೆಂದು ತಿಳಿದುಬಂದಿದೆ.
- Advertisement -