- Advertisement -
- Advertisement -
ವಿಟ್ಲ: ಪಡೂರು ಗ್ರಾಮದ ಕುಂಟುಕುಡೇಲು ಎಂಬಲ್ಲಿ ಕಾರ್ಮಿಕರೊಬ್ಬರು ನಲ್ವತ್ತು ಅಡಿ ಎತ್ತರದ ಮರವೇರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಕೂಲಿ ಕಾರ್ಮಿಕ ಸ್ಥಳೀಯ ನಿವಾಸಿ ಜಾರಪ್ಪನಾಯ್ಕ (60).
ಘಟನೆಯ ವಿವರ: ಜಾರಪ್ಪನಾಯ್ಕ ಅವರು ಮನೆಯಿಂದ ಎಂದಿನಂತೆ ರಘುರಾಮ ತಂತ್ರಿಯವರ ತೋಟದ ಕೆಲಸಕ್ಕೆ ಹೋಗಿದ್ದರೂ. ಆದರೆ ಅಲ್ಲಿಗೆ ತಲುಪಿಲ್ಲ ,ಕೆಲಸಕ್ಕೆ ಬಂದಿಲ್ಲದ ಕಾರಣ ಮನೆಯವರಲ್ಲಿ ವಿಚಾರಿಸಿದಾಗ ಬೆಳಿಗ್ಗೆಯೇ ಹೋಗಿದ್ದಾರೆ ಎಂದು ತಿಳಿಸಿದ್ದರು. ಈ ಕಾರಣದಿಂದ ಅವರನ್ನು ಎಲ್ಲೆಡೆಯೂ ಹುಡುಕಾಡಿದ್ದು, ತೋಟದೊಳಗಿನ ಸುಮಾರು ನಲ್ವತ್ತು ಅಡಿ ಎತ್ತರದ ಮರದಲ್ಲಿ ನೇಣಿಗೆ ಶರಣಾಗಿರುವುದು ಕಂಡುಬಂದಿದೆ.
ಅವರ ಮೃತದೇಹವನ್ನು ವಿಟ್ಲ ಪೊಲೀಸರು ಆಗಮಿಸಿದ ನಂತರ ಕೆಳಕ್ಕಿಳಿಸಲಾಯಿತು. ಈ ಘಟನೆಯ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -