Sunday, April 28, 2024
Homeಅಪರಾಧ40 ಅಡಿ ಎತ್ತರದ ಮರವೇರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಕಾರ್ಮಿಕ

40 ಅಡಿ ಎತ್ತರದ ಮರವೇರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಕಾರ್ಮಿಕ

spot_img
- Advertisement -
- Advertisement -

ವಿಟ್ಲ: ಪಡೂರು ಗ್ರಾಮದ ಕುಂಟುಕುಡೇಲು ಎಂಬಲ್ಲಿ ಕಾರ್ಮಿಕರೊಬ್ಬರು ನಲ್ವತ್ತು ಅಡಿ ಎತ್ತರದ ಮರವೇರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಕೂಲಿ ಕಾರ್ಮಿಕ ಸ್ಥಳೀಯ ನಿವಾಸಿ ಜಾರಪ್ಪನಾಯ್ಕ (60).

ಘಟನೆಯ ವಿವರ: ಜಾರಪ್ಪನಾಯ್ಕ ಅವರು ಮನೆಯಿಂದ ಎಂದಿನಂತೆ ರಘುರಾಮ ತಂತ್ರಿಯವರ ತೋಟದ ಕೆಲಸಕ್ಕೆ ಹೋಗಿದ್ದರೂ. ಆದರೆ ಅಲ್ಲಿಗೆ ತಲುಪಿಲ್ಲ ,ಕೆಲಸಕ್ಕೆ ಬಂದಿಲ್ಲದ ಕಾರಣ ಮನೆಯವರಲ್ಲಿ ವಿಚಾರಿಸಿದಾಗ ಬೆಳಿಗ್ಗೆಯೇ ಹೋಗಿದ್ದಾರೆ ಎಂದು ತಿಳಿಸಿದ್ದರು. ಈ ಕಾರಣದಿಂದ ಅವರನ್ನು ಎಲ್ಲೆಡೆಯೂ ಹುಡುಕಾಡಿದ್ದು, ತೋಟದೊಳಗಿನ ಸುಮಾರು ನಲ್ವತ್ತು ಅಡಿ ಎತ್ತರದ ಮರದಲ್ಲಿ ನೇಣಿಗೆ ಶರಣಾಗಿರುವುದು ಕಂಡುಬಂದಿದೆ.

ಅವರ ಮೃತದೇಹವನ್ನು ವಿಟ್ಲ ಪೊಲೀಸರು ಆಗಮಿಸಿದ ನಂತರ ಕೆಳಕ್ಕಿಳಿಸಲಾಯಿತು. ಈ ಘಟನೆಯ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!