- Advertisement -
- Advertisement -
ಉಡುಪಿ: ಹೊಟೆಲ್ ಮಾಲೀಕರಿಗೆ ಹೋಟೆಲ್ ನಲ್ಲಿ ಮಟನ್ ಬಿರಿಯಾನಿ ಇಲ್ಲ ಎಂದಿದಕ್ಕೆ ಹಲ್ಲೆ ನಡೆಸಿರುವ ಘಟನೆ ಹೊಸಂಗಡಿ ಪೇಟೆಯಲ್ಲಿ ನಡೆದಿದೆ.
ಈ ಕುರಿತು ಶಂಭು ಶೆಟ್ಟಿ ಎಂಬವರು ಪೊಲೀಸರಿಗೆ ದೂರು ನೀಡಿದ್ದು , ಸಾಧಿಕ್ , ಸುನೀಲ್ ಮತ್ತು ಸತೀಶ ಎಂಬುವವರು ಹೋಟೆಲ್ ಗೆ ಹೋಗಿ ಮಟನ್ ಬಿರಿಯಾನಿ ಕೇಳಿದ್ದಾರೆ . ಈ ವೇಳೆ ಶಂಭು ಶೆಟ್ಟಿಯವರು ಮಟನ್ ಬಿರಿಯಾನಿ ಇಲ್ಲ ಬೇರೆ ಏನು ಬೇಕು ಎಂದು ಕೇಳಿದ್ದಕ್ಕೆ ಇವರು ಕೋಪದಲ್ಲಿ ನಾವು ಕೇಳಿದ್ದು ನಿಮ್ಮಲ್ಲಿ ಇಲ್ಲ ಬೇರೆ ಎನು ಕೊಡುತ್ತಿಯಾ ಎಂದು ಬೈದು ಹಲ್ಲೆ ಮಾಡಿದ್ದಾರೆ .
ಅಲ್ಲದೆ ಶಂಭು ಶೆಟ್ಟಿರವರ ಹೆಂಡತಿ ಗಲಾಟೆ ತಡೆಯಲು ಬಂದಾಗ ಅವರಿಗೂ ಹೊಡೆದಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
- Advertisement -