- Advertisement -
- Advertisement -
ಕಡಬ: ವಾಹನ ಡಿಕ್ಕಿಯಾಗಿ ನರಿಯೊಂದು ಸಾವನ್ನಪ್ಪಿದ ಘಟನೆ ಕಡಪ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ದೇರಾಜೆ ಕ್ರಾಸ್ ನಲ್ಲಿ ನಡೆದಿದೆ.
ನಿನ್ನೆ ರಾತ್ರಿ ಅಪರಿಚಿತ ಕಾರೊಂದು ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ನರಿ ಸಾವನ್ನಪ್ಪಿದೆ. ಕಾಡು ಪ್ರದೇಶಗಳಿಂದ ಕೂಡಿರುವ ಈ ಪ್ರದೇಶದಲ್ಲಿ ವಿವಿಧ ಪ್ರಾಣಿಗಳು ರಸ್ತೆ ದಾಟುತ್ತಿವೆ. ಈ ಭಾಗದಲ್ಲಿ ಅರಣ್ಯ ಇಲಾಖೆ ಸೂಕ್ತ ಜಾಗೃತಿ ಸೂಚನಾ ಫಲಕ ಹಾಕಿದರೆ ಕಾಡು ಪ್ರಾಣಿಗಳು ಸಾವನ್ನಪ್ಪುವುದನ್ನು ತಡೆಯಬಹುದೆಂದು ಪರಿಸರ ಪ್ರೇಮಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
- Advertisement -