- Advertisement -
- Advertisement -
ಬಂಟ್ವಾಳ: ಕರಿಯಂಗಳ ಗ್ರಾಮದ ಸಾಣೂರು ಪದವಿನಲ್ಲಿ ಬಾಲಕನೊಬ್ಬ ಸಿಡಿಲು ಬಡಿದು ಸಾವನ್ನಪ್ಪಿದ ಘಟನೆ ನಿನ್ನೆ(ನ.14) ರಾತ್ರಿ ನಡೆದಿದೆ.
ಸಾಣೂರುಪದವು ಗಣೇಶ್ ಆದಿ ದ್ರಾವಿಡ ಅವರ ಪುತ್ರ ಕಾರ್ತಿಕ್ (16) ಮೃತಪಟ್ಟ ಬಾಲಕ. ನಿನ್ನೆ ರಾತ್ರಿ ಮನೆಮಂದಿ ನಿದ್ರಿಸುತ್ತಿದ್ದ ಸಮಯ ಸಿಡಿಲು ಬಡಿದಂತಾದ ಅನುಭವಾಗಿದೆ. ಆಗ ಎಲ್ಲರೂ ಮನೆಯ ಹಾಲ್ಗೆ ಓಡಿಬಂದಿದ್ದಾರೆ. ಆದ್ರೆ ಕಾರ್ತಿಕ್ ಬಾರದೇ ಇದ್ದಾಗ ಆತನನ್ನ ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದ್ರೆ ವೈದ್ಯರು ಆತ ಮೃತಪಟ್ಟಿರೋದಾಗಿ ತಿಳಿಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -