- Advertisement -
- Advertisement -
ಮಂಗಳೂರು: ಸುರತ್ಕಲ್ ಎನ್ಐಟಿಕೆ ಬಳಿ ಇರುವ ಅಕ್ರಮ ಟೋಲ್ಗೇಟ್ ವಿರುದ್ಧ ನಿರಂತರ ಹೋರಾಟಕ್ಕೆ ಮಣಿದ ಕೇಂದ್ರ ಸರಕಾರ ಕೊನೆಗೂ ಟೋಲ್ಗೇಟ್ನ್ನು ಹೆಜಮಾಡಿ ಟೋಲ್ಗೇಟ್ನೊಂದಿಗೆ ವಿಲೀನಗೊಳಿಸಿ ಆದೇಶ ಹೊರಡಿಸಿದೆ.
ಆದ್ರೆ ಸುರತ್ಕಲ್ ಟೋಲ್ಗೇಟ್ ರದ್ದಾದರೂ ಹೆಜಮಾಡಿಯಲ್ಲಿ ಶುಲ್ಕ ಸಂಗ್ರಹದ ಮೊತ್ತ ಹೆಚ್ಚಾಗುವ ಸಾಧ್ಯತೆ ಕಂಡುಬಂದಿದೆ. ನ.11 ರಂದೇ ಈ ಆದೇಶ ಹೊರಡಿಸಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಮೂಲಕ ಹೋರಾಟ ನಿಲ್ಲಿಸಲು ರಾಜಕಾರಣಿಗಳು ಈ ತಂತ್ರ ಮಾಡಿದ್ರಾ ಎಂಬ ಪ್ರಶ್ನೆ ಹುಟ್ಟಿದೆ. ಒಂದು ಟೋಲ್ ಬಂದ್ ಮಾಡಿ ನವಯುಗ ಕಂಪನಿಯ ಮತ್ತೊಂದು ಟೋಲ್ ನಲ್ಲಿ ಹೆಚ್ಚುವರಿ ಹಣ ಸುಲಿಗೆ ಮಾಡಲು ತಯಾರಿ ನಡೆಸಿದಂತಿದೆ. ಈ ಬಗ್ಗೆ ವ್ಯಾಪಕ ಚರ್ಚೆಯೂ ಶುರುವಾಗಿದೆ.
- Advertisement -