Thursday, May 2, 2024
Homeಕರಾವಳಿಬೆಳ್ತಂಗಡಿ: ನೆರಿಯದ ಲಾವಣ್ಯ ಏರ್ ಇಂಡಿಯಾ ಎಕ್ಸ್ಪ್ರೆಸ್‌ನಲ್ಲಿ ಗಗನಸಖಿಯಾಗಿ ಆಯ್ಕೆ

ಬೆಳ್ತಂಗಡಿ: ನೆರಿಯದ ಲಾವಣ್ಯ ಏರ್ ಇಂಡಿಯಾ ಎಕ್ಸ್ಪ್ರೆಸ್‌ನಲ್ಲಿ ಗಗನಸಖಿಯಾಗಿ ಆಯ್ಕೆ

spot_img
- Advertisement -
- Advertisement -

ಬೆಳ್ತಂಗಡಿ: ನೆರಿಯ ಗ್ರಾಮದ  ಅಣಿಯೂರು ನಿವಾಸಿ ಲಾವಣ್ಯರವರು ಏರ್ ಇಂಡಿಯಾ ಎಕ್ಸ್ಪ್ರೆಸ್‌ನಲ್ಲಿ ಗಗನಸಖಿಯಾಗಿ ಆಯ್ಕೆಯಾಗಿದ್ದಾರೆ. ಇವರು  ನಂದಕುಮಾರ್ ಮತ್ತು ಸುನಂದ ಅವರ ಪುತ್ರಿ.

ಹಿಂದೆ ಸ್ಟಾರ್ ಏರ್‌ಲೈನ್ ಹಾಗೂ ಸ್ಪೈಸ್ ಜೆಟ್ ನಲ್ಲಿ ಕತೇರಿ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸಿದ್ದರು. ತನ್ನ ಪ್ರಾಥಮಿಕ ಶಿಕ್ಷಣವನ್ನು ಮುಂಡಾಜೆಯ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೂರೈಸಿ ಕಾಲೇಜು ಶಿಕ್ಷಣವನ್ನು ಉಜಿರೆಯ ಎಸ್.ಡಿ.ಎಂ. ಕಾಲೇಜಿನಲ್ಲಿ ಪೂರೈಸಿದ್ದಾರೆ. ಬಳಿಕ ಬೆಂಗಳೂರಿನ Aptech aviation academy ಯಲ್ಲಿ ವಿಮಾನಯಾನಕ್ಕೆ ಸಂಬಂಧಿಸಿದಂತೆ Diploma in Aviation ಹಾಗೂ hospitality and travel management ಪದವಿಯನ್ನು ಪಡೆದಿದ್ದು ಇದೀಗ ಏರ್ ಇಂಡಿಯಾ ಎಕ್ಸ್ಪ್ರೆಸ್‌ನಲ್ಲಿ ಗಗನಸಖಿಯಾಗಿ ಆಯ್ಕೆಯಾಗಿದ್ದಾರೆ.

ಬಹುಮುಖ ಪ್ರತಿಭೆಯಾಗಿರುವ ಈಕೆ 2019ರಲ್ಲಿ ನಡೆದ Miss South Indian Ranai  ಸ್ಪರ್ಧೆಯಲ್ಲಿ  Miss best glamorous look south india, Miss Fashion Icon ಮತ್ತು Miss Rising star South ಪ್ರಶಸ್ತಿಗಳನ್ನು ಕೂಡಾ ತನ್ನ ಮುಡಿಗೇರಿಸಿಕೊಂಡಿದ್ದರು.

ಇವರು ಮುಂದಿನ 3 ತಿಂಗಳುಗಳ ಕಾಲ ಮುಂಬೈಯಲ್ಲಿ ತರಬೇತಿಯನ್ನು ಪಡೆದು ಬಳಿಕ ಗಗನಸಖಿಯಾಗಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಇವರ ಈ ಸಾಧನೆಗೆ ತಂದೆ – ತಾಯಿ ಮತ್ತು ಸಹೋದರ ಶ್ರೇಯಸ್ ಬೆಂಬಲವಾಗಿ ನಿಂತಿದ್ದಾರೆ.

- Advertisement -
spot_img

Latest News

error: Content is protected !!