- Advertisement -
- Advertisement -
ಉಡುಪಿ: ಕೊಲ್ಲೂರಿಗೆ ಇಂದು ಸಿಂಗಾಪುರದ ಗೃಹ ಸಚಿವ ಕಾಶಿ ವಿಶ್ವನಾಥನ್ ಷಣ್ಮುಗಂ ಭೇಟಿ ನೀಡಿದ್ದಾರೆ.
ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ನವ ಚಂಡಿಕಾಹೋಮ ಮತ್ತು ಮಹಾಪೂಜೆಯಲ್ಲಿ ಸಿಂಗಾಪುರದ ಗೃಹ ಸಚಿವರು ಭಾಗಿಯಾಗಿದ್ದಾರೆ.
ಪೂರ್ಣ ಕುಂಭ ಸ್ವಾಗತದೊಂದಿಗೆ ಕಾಶಿ ವಿಶ್ವನಾಥನ್ ಷಣ್ಮುಗಂ ಅವರನ್ನು ದೇವಸ್ಥಾನದ ಆಡಳಿತ ಮಂಡಳಿ ಬರಮಾಡಿಕೊಂಡಿದ್ದು,
ದೇವಳದ ಪ್ರಧಾನ ಅರ್ಚಕ ನರಸಿಂಹ ಅಡಿಗ ನೇತೃತ್ವದಲ್ಲಿ ಪೂಜಾ ಕಾರ್ಯ ನಡೆದಿದೆ.
ಸಿಂಗಾಪುರ ಗೃಹ ಸಚಿವರ ಭೇಟಿ ಹಿನ್ನೆಲೆಯಲ್ಲಿ ದೇಗುಲದ ಸುತ್ತಮುತ್ತಲಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
- Advertisement -