Monday, May 20, 2024
Homeಕರಾವಳಿಉಡುಪಿಬೆಂಗಳೂರು: ಉಡುಪಿ ಮೂಲದ ಇಬ್ಬರು ದರೋಡೆಕೋರರ ಮೇಲೆ ಶೂಟೌಟ್

ಬೆಂಗಳೂರು: ಉಡುಪಿ ಮೂಲದ ಇಬ್ಬರು ದರೋಡೆಕೋರರ ಮೇಲೆ ಶೂಟೌಟ್

spot_img
- Advertisement -
- Advertisement -

ಬೆಂಗಳೂರು: ಕಳೆದ ಮಾರ್ಚ್ 26ರಂದು ಉಡುಪಿಯ ಮಣಿಪಾಲ ಮೂಲದ ದರೋಡೆಕೋರರು ಬೆಂಗಳೂರು ಮೂಲದ ವ್ಯಕ್ತಿಯ ಕಾರು ಅಡ್ಡಗಟ್ಟಿ ಸುಲಿಗೆ ಮಾಡಿದ್ದರು.  ಉಡುಪಿಯ ಮೂಲದ ಆಶಿಕ್ ಮತ್ತು ಇಸಾಕ್ ವಿರುದ್ಧ ಮಣಿಪಾಲದಲ್ಲಿ ರೌಡಿಶೀಟರ್ ಸಹ ತೆರೆಯಲಾಗಿದೆ. ರಿಟ್ಜ್ ಕಾರಿನಲ್ಲಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿ ಎಟಿಎಂಗೆ ಕರೆದೊಯ್ದು, ದುಡ್ಡು ಡ್ರಾ ಮಾಡಿಸಿಕೊಂಡು ನಂತರ ಆತನ ಮೇಲೆಯೇ ಲೈಂಗಿಕ ದೌರ್ಜನ್ಯ ಎಸಗಿದ್ದರು.. ಈ ಬಗ್ಗೆ ಸಂತ್ರಸ್ತ ವ್ಯಕ್ತಿ ಕೊತ್ತನೂರು ಠಾಣೆಯಲ್ಲಿ ರಾಬರಿ ಕೇಸ್ ದಾಖಲಿಸಿದ್ದ..

ದೂರು ದಾಖಲಿಸಿಕೊಂಡ ಕೊತ್ತನೂರು ಪೊಲೀಸರು ಸಂಪಿಗೆ ಹಳ್ಳಿ ಉಪವಿಭಾಗ ಎಸಿಪಿ ರಂಗಪ್ಪ ನೇತೃತ್ವದಲ್ಲಿ ಕಾರ್ಯಚರಣೆಗಿಳಿದರು.. ಖಚಿತ ಮಾಹಿತಿ ಮೇರೆಗೆ ಕೊತ್ತನೂರು ಇನ್ಸ್ ಪೆಕ್ಟರ್ ಚನ್ನೇಶ್ ಮತ್ತು ತಂಡ ಬಂಧಿಸಲು ಇಂದು ಸಂಜೆ ತೆರಳಿದ್ದರು. ಈ ವೇಳೆ ಆಶಿಕ್ ಮತ್ತು ಇಸಾಕ್ ಪೊಲೀಸರ ಮೇಲೆಯೇ ಚಾಕುವಿನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದರು. ನಂತರ ಸಂಪಿಗೆಹಳ್ಳಿ ಲಿಮಿಟ್ಸ್ ಶಿವರಾಮ ಕಾರಂತ ಬಡಾವಣೆಯ ಕ್ಲಬ್ ಬಳಿ ಶೂಟೌಟ್ ಮಾಡಿ ಬಂಧಿಸಲಾಗಿದೆ..

- Advertisement -
spot_img

Latest News

error: Content is protected !!