- Advertisement -
- Advertisement -
ಪದ್ಮುಂಜ: ಹಲವಾರು ರೋಗಗಳಿಗೆ ನಾಟಿಮದ್ದು ನೀಡುತ್ತಿದ್ದ, ಪದ್ಮುಂಜ ನಿವಾಸಿ ದಿವಂಗತ| ಅಂಗಾರ ನಾಲ್ಕೆಯವರ ಪುತ್ರ, ನಾಟಿವೈದ್ಯ ವೆಂಕಪ್ಪ ಪಂಡಿತರವರು ನ.19 ರಂದು ರಾತ್ರಿ ನಿಧನರಾದರು.
ವೆಂಕಪ್ಪ ಅವರು ನಾಟಿ ವೈದ್ಯರಾಗಿ ಪಕ್ಷಪಾತ, ಕೆಂಪು, ಕಣ್ಣಿನ ಧೃಷ್ಟಿ, ಚಿನ್ನೆ ಸೇರಿದಂತೆ ಹಲವಾರು ರೋಗಗಳಿಗೆ ನಾಟಿಮದ್ದು ನೀಡುತ್ತಿದ್ದರು. ಅಲ್ಲದೆ ಊರಿನಲ್ಲಿ ಜನಪ್ರಿಯತೆ ಗಳಿಸಿದ್ದರು. ಹಲವಾರು ಕಡೆಳಿಂದ ನೂರಾರು ಜನರು ಪ್ರತೀನಿತ್ಯ ಇವರ ಮನೆಗೆ ಬಂದು ಗುಣಮುಖರಾಗಿ, ನಾಟಿ ಮದ್ದಿನಿಂದ ಉಪಯೋಗವನ್ನು ಪಡೆಯುತ್ತಿದ್ದರು.
ಮೃತರು ಪತ್ನಿ ಸರಸ್ವತಿ, ಪುತ್ರರಾದ ಕುಶಾಲಪ್ಪ, ಉಮೇಶ, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬದವರನ್ನು ಅಗಲಿದ್ದಾರೆ.
- Advertisement -