Monday, June 30, 2025
Homeಕರಾವಳಿಬೆಳ್ತಂಗಡಿ: ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಪರಿಚಿತರಿಂದ ಚೂರಿ ಇರಿತ

ಬೆಳ್ತಂಗಡಿ: ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಪರಿಚಿತರಿಂದ ಚೂರಿ ಇರಿತ

spot_img
- Advertisement -
- Advertisement -

ಬೆಳ್ತಂಗಡಿ: ದಾರಿಯಲ್ಲಿ ತಮ್ಮ ಪಾಡಿಗೆ ನಡೆದುಕೊಂಡು ಹೋಗುತ್ತಿದ್ದಾಗ ವಿನಾಕಾರಣ ಕೆಲ ದುಷ್ಕರ್ಮಿಗಳು ವ್ಯಕ್ತಿಯೋರ್ವರಿಗೆ ಚೂರಿ ಇರಿದಿರುವ ಘಟನೆ ತಾಲೂಕಿನ ನೆರಿಯ ಕಾಡು ಎಂಬಲ್ಲಿ ನಡೆದಿದೆ.

ಘಟನೆಯ ವಿವರ:
ನೆರಿಯ ಗ್ರಾಮದ ಮಾಥ್ಯೂ ಎನ್.ಟಿ ರವರು ತನ್ನ ಪುತ್ರ ಮಿಥುನ್ ರವರ ಜೊತೆ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಸಂದರ್ಭದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ಪರಿಚಿತರೇ ಆದ ಸೋಜೋ ಹಾಗೂ ಅವರ ತಮ್ಮ ಜೋಬಿನ್ ಎಂಬವರು ಮಿಥುನ್ ರವರನ್ನು ತಡೆದು ಅವ್ಯಾಚ್ಯ ಮಾತುಗಳಿಂದ ನಿಂದಿಸಿ ಚೂರಿಯಿಂದ ಹಲ್ಲೆ ನಡೆಸಲು ಮುಂದಾಗಿದ್ದಾರೆ.

ಮ್ಯಾಥ್ಯೂ ರವರು ಇದನ್ನು ತಡೆಯಲು ಮುಂದಾದಾಗ ಅವರ ಎಡ ಕೆನ್ನೆಗೆ, ಎಡಕಿವಿಗೆ, ಎಡ ಕಿವಿಯ ಹಿಂಭಾಗ, ಎಡ ಕುತ್ತಿಗೆಗೆ ಮತ್ತು ಹೊಟ್ಟೆಗೆ ಚೂರಿಯಿಂದ ಇರಿತಕ್ಕೊಳಗಾಗಿದ್ದಾರೆ. ಇವರ ಬೊಬ್ಬೆ ಕೇಳಿ ಸ್ಥಳಕ್ಕೆ ಓಡಿಬಂದ ನೆರೆಮನೆಯ ಬಿನೀಶ್ ಅವರಿಗೂ ಆರೋಪಿಗಳು ಬೆದರಿಕೆಯೊಡ್ಡಿದ್ದು, ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಚೂರಿಯಿಂದ ತಿವಿತಕ್ಕೊಳಪಟ್ಟು ಗಂಭೀರ ಗಾಯಗೊಂಡ ಮ್ಯಾಥ್ಯೂರವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಣದ ವಿಚಾರದಲ್ಲಿ ಈ ಹಲ್ಲೆ ನಡೆದಿದೆ ಎಂದು ವರದಿಯಾಗಿದೆ.

- Advertisement -
spot_img

Latest News

error: Content is protected !!