Tuesday, August 25, 2026
Homeಅಪರಾಧದೇಶಭ್ರಷ್ಟ ಅಪರಾಧಿಗಳನ್ನು ಭಾರತಕ್ಕೆ ಗಡೀಪಾರು ಮಾಡಲಾಗಿದೆ; ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ

ದೇಶಭ್ರಷ್ಟ ಅಪರಾಧಿಗಳನ್ನು ಭಾರತಕ್ಕೆ ಗಡೀಪಾರು ಮಾಡಲಾಗಿದೆ; ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ

- Advertisement -
- Advertisement -

ಮಲೇಷ್ಯಾದಲ್ಲಿ ಬಂಧಿತರಾಗಿದ್ದ ಬಾಂಬಿಹಾ ಗ್ಯಾಂಗ್‌ಗೆ ಸೇರಿದ ಜಸ್‌ಪ್ರೀತ್ ಸಿಂಗ್, ಅಜಯ್ ಸಿಂಗ್ ಹಾಗೂ ಪವನ್‌ದೀಪ್ ಸಿಂಗ್ ಎಂಬ ಮೂವರು ದೇಶಭ್ರಷ್ಟ ಅಪರಾಧಿಗಳನ್ನು ಭಾರತಕ್ಕೆ ಗಡೀಪಾರು ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

ಈ ಆರೋಪಿಗಳು ಸುಲಿಗೆ, ಗಡಿಯಾಚೆಗಿನ ಶಸ್ತ್ರಾಸ್ತ್ರ ಮತ್ತು ಮಾದಕ ದ್ರವ್ಯ ಕಳ್ಳಸಾಗಣೆ ಸೇರಿದಂತೆ ಹಲವು ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಪಂಜಾಬ್‌ನಲ್ಲಿ ನಡೆದಿದ್ದ ಗ್ರೆನೇಡ್ ದಾಳಿಯಲ್ಲೂ ಇವರ ನಂಟಿದೆ ಎಂದು ಹೇಳಲಾಗಿದೆ.

ಕೇಂದ್ರ ತನಿಖಾ ಸಂಸ್ಥೆಗಳ ಸತತ ಪ್ರಯತ್ನದಿಂದ ಈ ವರ್ಷದಲ್ಲಿ ಇದುವರೆಗೆ ಒಟ್ಟು 51 ಪರಾರಿಯಾಗಿದ್ದ ಅಪರಾಧಿಗಳನ್ನು ವಿದೇಶಗಳಿಂದ ಭಾರತಕ್ಕೆ ಯಶಸ್ವಿಯಾಗಿ ಗಡೀಪಾರು ಮಾಡಲಾಗಿದೆ.

- Advertisement -

Latest News

error: Content is protected !!