ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಕುದ್ರೆಬೆಟ್ಟು (ಕಲ್ಲಡ್ಕ ಸಮೀಪ) ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಪರಸ್ಪರ ಹೊಡೆದಾಡಿಕೊಂಡು ಶಾಂತಿ-ನೆಮ್ಮದಿಗೆ ಭಂಗ ಉಂಟುಮಾಡಿದ ಆರೋಪದ ಮೇರೆಗೆ ಏಳು ಮಂದಿಯ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರು ಕಬಕ ನಿವಾಸಿ ಟೆಂಪೋ ಚಾಲಕ ಶ್ರೀಧರ (38), ಮಂಗಳೂರಿನ ಸಂತೋಷ್ ಕುಮಾರ್ ಕೆ. (46) ಹಾಗೂ ಬೆಂಗಳೂರು ಮೂಲದ ಅಜ್ಮೀನ್ ಖಾನ್, ಶೇಖ್ ಫಾಹಾದ್ ಪಾಶ (29), ಸೈಯದ್ ಜೇಶನ್ ಅಹ್ಮದ್ (24), ಇಬ್ರಾಹಿಂ ಶರೀಫ್ (24) ಮತ್ತು ಜೋಯ ತಸ್ಕಿನ್ (20) ಪ್ರಕರಣ ಎದುರಿಸುತ್ತಿರುವ ಆರೋಪಿಗಳಾಗಿದ್ದಾರೆ.
ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ನಡೆಯುತ್ತಿರುವ ಕುರಿತು ಮಾಹಿತಿ ಲಭಿಸಿದ ತಕ್ಷಣ ಬಂಟ್ವಾಳ ನಗರ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಸಂದೀಪ್ ಕುಮಾರ್ ಶೆಟ್ಟಿ ಅವರು ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿ, ಗುಂಪನ್ನು ಚದುರಿಸಿ ವಿಚಾರಣೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಮುಂದುವರಿಸಿದ್ದಾರೆ.


