Monday, June 29, 2026
HomeUncategorizedಮಂಗಳೂರು ನ್ಯಾಯಾಲಯಕ್ಕೆ ಕೆಮಿಕಲ್ ಬಾಂಬ್ ಬೆದರಿಕೆ: ಆವರಣದಲ್ಲಿ ತೀವ್ರ ಶೋಧ!

ಮಂಗಳೂರು ನ್ಯಾಯಾಲಯಕ್ಕೆ ಕೆಮಿಕಲ್ ಬಾಂಬ್ ಬೆದರಿಕೆ: ಆವರಣದಲ್ಲಿ ತೀವ್ರ ಶೋಧ!

- Advertisement -
- Advertisement -

ಮಂಗಳೂರು: ಇಲ್ಲಿನ ಜಿಲ್ಲಾ ನ್ಯಾಯಾಲಯದ ಆವರಣಕ್ಕೆ ಸೋಮವಾರ (ಜೂನ್ 29 ರಂದು) ಇಮೇಲ್ ಮೂಲಕ ಕೆಮಿಕಲ್ ಬಾಂಬ್ ಸ್ಫೋಟಿಸುವ ಬೆದರಿಕೆ ಸಂದೇಶ ಬಂದಿದ್ದು, ನ್ಯಾಯಾಲಯದ ಆವರಣದಲ್ಲಿ ಕೆಲಕಾಲ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಮಧ್ಯಾಹ್ನದ ವೇಳೆಗೆ ಇಸ್ರೇಲ್ ದೂತವಾಸದೊಂದಿಗೆ ಮಂಗಳೂರು ನ್ಯಾಯಾಲಯವನ್ನೂ ಕೆಮಿಕಲ್ ಬಾಂಬ್ ಬಳಸಿ ಸ್ಫೋಟಿಸುವುದಾಗಿ ಇಮೇಲ್‌ನಲ್ಲಿ ಎಚ್ಚರಿಸಲಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ನ್ಯಾಯಾಲಯದ ಆವರಣವನ್ನು ತಮ್ಮ ಸುಪರ್ದಿಗೆ ಪಡೆದುಕೊಂಡರು.

ತಮಿಳುನಾಡಿನ ಸಂಸದ ಎನ್. ಆರ್. ಇಳಂಗೋ ಅವರು ಮಾಡಿದ ದ್ರೋಹದ ಕಾರಣಕ್ಕಾಗಿ ಈ ಕೃತ್ಯ ಎಸಗುತ್ತಿರುವುದಾಗಿ ಇಮೇಲ್‌ನಲ್ಲಿ ಉಲ್ಲೇಖಿಸಲಾಗಿದೆ. ತಾನು “GenZ DMK ಲೀಡರ್” ಎಂದು ಹೇಳಿಕೊಂಡಿರುವ ಅನ್ಬನಂತನ್ ಐಯ್ಯಪ್ಪನ್ ಎಂಬಾತನ ಹೆಸರಿನಿಂದ ಈ ಬೆದರಿಕೆ ಇಮೇಲ್ ರವಾನೆಯಾಗಿದೆ. ಅಷ್ಟೇ ಅಲ್ಲದೆ, “ಎಲ್ಲಾ ನ್ಯಾಯಾಧೀಶರ ಮೂಗು ಮತ್ತು ಬಾಯಿಗಳನ್ನು ಮುಚ್ಚಿ ಅವರನ್ನು ತಕ್ಷಣವೇ ಬೇರೆಡೆಗೆ ಸ್ಥಳಾಂತರಿಸಿ” ಎಂಬ ವಿಚಿತ್ರ ಹಾಗೂ ವಿಲಕ್ಷಣ ಬೇಡಿಕೆಯನ್ನೂ ಇಮೇಲ್‌ನಲ್ಲಿ ಇಡಲಾಗಿದೆ.

ಬೆದರಿಕೆ ಇಮೇಲ್ ಬಂದ ಹಿನ್ನೆಲೆಯಲ್ಲಿ ತಕ್ಷಣವೇ ಎಚ್ಚೆತ್ತುಕೊಂಡ ಮಂಗಳೂರು ನಗರ ಪೊಲೀಸರು, ಬಾಂಬ್ ಪತ್ತೆ ದಳ ಮತ್ತು ಶ್ವಾನದಳದೊಂದಿಗೆ ನ್ಯಾಯಾಲಯದ ಆವರಣಕ್ಕೆ ಧಾವಿಸಿದರು. ನ್ಯಾಯಾಲಯದ ಎಲ್ಲಾ ಕೋರ್ಟ್ ರೂಮ್‌ಗಳು, ಕಚೇರಿ ಕೊಠಡಿಗಳು, ಕಾರಿಡಾರ್‌ಗಳು ಹಾಗೂ ವಾಹನ ನಿಲ್ದಾಣ ಸೇರಿದಂತೆ ಪ್ರತಿಯೊಂದು ಮೂಲೆಯನ್ನೂ ತೀವ್ರ ಶೋಧ ನಡೆಸಲಾಯಿತು.

- Advertisement -

Latest News

error: Content is protected !!