Saturday, June 6, 2026
Homeತಾಜಾ ಸುದ್ದಿರಾಜ್ಯ ಸರ್ಕಾರಿ ನೌಕರರು 10 ಗಂಟೆಯೊಳಗೆ ಕರ್ತವ್ಯದಲ್ಲಿರಬೇಕು; ರಾಜ್ಯ ಸರ್ಕಾರದಿಂದ ಸೂಚನೆ

ರಾಜ್ಯ ಸರ್ಕಾರಿ ನೌಕರರು 10 ಗಂಟೆಯೊಳಗೆ ಕರ್ತವ್ಯದಲ್ಲಿರಬೇಕು; ರಾಜ್ಯ ಸರ್ಕಾರದಿಂದ ಸೂಚನೆ

- Advertisement -
- Advertisement -

ಬೆಂಗಳೂರು: ಇನ್ನು ಮುಂದೆ ರಾಜ್ಯ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಬೆಳಗ್ಗೆ 10 ಗಂಟೆಯೊಳಗಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ನಿನ್ನೆ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡೆಸಿದ ಇಲಾಖಾ ಮುಖ್ಯಸ್ತಯೆ ಸಭೆಯಲ್ಲಿ ಈ ನಿರ್ದೇಶನ ನೀಡಿದ್ದು, ಇಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ಸುತ್ತೋಲೆ ಹೊರಡಿಸಿದ್ದಾರೆ.

ಅಲ್ಲದೇ ಸರ್ಕಾರಿ ನೌಕರರು ಕರ್ತವ್ಯ ಆ್ಯಪ್ ಅನ್ನು ನಿಯಮಿತವಾಗಿ ಬಳಸುವಂತೆ ಮತ್ತು ಇಲಾಖೆ ಮುಖ್ಯಸ್ಥರು ಪರಿಶೀಲನೆ ನಡೆಸುವಂತೆಯೂ ಮುಖ್ಯ ಕಾರ್ಯದರ್ಶಿ ಸೂಚಿಸಿದ್ದಾರೆ.

ಇದೇ ವೇಳೆ ನೌಕರರು ಕರ್ತವ್ಯದ ನಿಮಿತ್ತ ಬೇರೆ ಕಡೆಗೆ ತೆರಳಿದ್ದರೆ ಕರ್ತವ್ಯ ಆ್ಯಪ್ ನಲ್ಲಿ ಓಓಡಿ ಆಪ್ಷನ್ ನಲ್ಲಿ ತಪ್ಪದೇ ನಮೂದಿಸುವಂತೆಯೂ ಸೂಚಿಸಲಾಗಿದೆ.

- Advertisement -

Latest News

error: Content is protected !!