Sunday, August 30, 2026
Homeಕರಾವಳಿಬೈಕ್‌ ಗೆ ಹಿಂಬಂದಿಯಿಂದ ಬಂದು ಢಿಕ್ಕಿ ಹೊಡೆದ ಕಾರು; ಬೈಕ್‌ ಸವಾರನಿಗೆ ಗಾಯ

ಬೈಕ್‌ ಗೆ ಹಿಂಬಂದಿಯಿಂದ ಬಂದು ಢಿಕ್ಕಿ ಹೊಡೆದ ಕಾರು; ಬೈಕ್‌ ಸವಾರನಿಗೆ ಗಾಯ

- Advertisement -
- Advertisement -

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ಕೆಪಿಟಿ ಸಮೀಪದ ಎಸ್. ಕೆ. ಎಸ್. ಜಂಕ್ಷನ್ ನಲ್ಲಿ ಕಾರೊಂದು ಬೈಕ್ ಗೆ ಹಿಂದಿನಿಂದ ಬಂದು ಢಿಕ್ಕಿ ಹೊಡೆದ ಘಟನೆ ನಡೆದಿದೆ.

ಘಟನೆಯಲ್ಲಿ ಬೈಕ್‌ ಸವಾರನಿಗೆ ಗಾಯವಾಗಿದೆ.

ಘಟನೆಯ ವಿವರ: ಬೈಕ್ ಸವಾರ ಭಾಗ್ಯರಾಜ್ ಪೂಜಾರಿ, ಸ್ವಾತಿ ಅವರನ್ನು ಸಹ ಸವಾರೆಯನ್ನಾಗಿ ಕೂರಿಸಿಕೊಂಡು ಸುರತ್ಕಲ್ ಕಡೆಯಿಂದ ಬರುತ್ತಿದ್ದಾಗ ಹಿಂದಿನಿಂದ ಬಂದ ಕಾರನ್ನು ಚಾಲಕ ರಫಾನ್ ಮೊಹಮ್ಮದ್ ಮುಸ್ತಾಫ ಬೈಕ್ ಗೆ ತಾಗಿಸಿದ್ದಾನೆ ಎನ್ನಲಾಗಿದೆ.ಇದರಿಂದ ಭಾಗ್ಯರಾಜ್ ಅವರಿಗೆ ಗಾಯವಾಗಿದ್ದು, ಬೈಕ್ ಹತೋಟಿ ತಪ್ಪಿದಾಗ ಬೀಳದಂತೆ ತಡೆದಿದ್ದಾರೆ. ಕಾರು ಚಾಲಕ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದು, ಸಾರ್ವಜನಿಕರು ತಡೆದು ನಿಲ್ಲಿಸಿದ್ದಾರೆ. ಕದ್ರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!