- Advertisement -
![]()
- Advertisement -
ಬೆಂಗಳೂರು: ನಾನು ಕಾಂಗ್ರೆಸ್ ಕಾರ್ಯಕರ್ತ. ರಮಾನಾಥ್ ರೈ ಜೊತೆ ಚುನಾವಣೆಗಾಗಿ ನನ್ನ ಅಂಗಡಿ ಕೆಲಸ ಬಿಟ್ಟು 42 ದಿನ ಕೆಲಸ ಮಾಡಿದ್ದೇನೆ, ಆದ್ರು ಅವರು ನಮ್ಮ ಮನೆಗೆ ಬಂದಿಲ್ಲ ಎಂದು ಸುಹಾಸ್ ಶೆಟ್ಟಿ ಮಾವ ರಾಜೇಶ್ ಭಂಡಾರಿ ಹೇಳಿದ್ದಾರೆ.
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ಎನ್ ಐಎ ತನಿಖೆಗೆ ಹಸ್ತಾಂತರಿಸಲು ರಾಜ್ಯಪಾಲರಿಗೆ ಮನವಿ ಮಾಡಿದ ಬಳಿಕ ಮಾತನಾಡಿದ ಅವರು ನಾನು ಕಾಂಗ್ರೆಸ್ ಕಾರ್ಯಕರ್ತ. ರಮಾನಾಥ್ ರೈ ಜೊತೆ ಚುನಾವಣೆ ಕೆಲಸ ಮಾಡಿದ್ದೇನೆ. ನನ್ನ ಅಂಗಡಿ ಕೆಲಸ ಬಿಟ್ಟು 42 ದಿನ ಕೆಲಸ ಮಾಡಿದ್ದೇನೆ. ಈಗ ಅವರು ನಮ್ಮ ಮನೆಗೆ ಬಂದಿಲ್ಲ. ಗೃಹ ಸಚಿವ ಪರಮೇಶ್ವರ್ ಬಂದಿಲ್ಲ. ಸಾವಾದ ಮನೆಗೆ ಬರಲಿಲ್ಲ. ಗೂಂಡಾ ಅಂತಾರೆ. ಇವರ ಮೇಲೆ ನಮಗೆ ನಂಬಿಕೆ ಇಲ್ಲ. ಹೀಗಾಗಿ ರಾಜ್ಯಪಾಲರಿಗೆ ದೂರು ನೀಡಿದ್ದೇವೆ ಎಂದಿದ್ದಾರೆ.
- Advertisement -


