Saturday, June 6, 2026
Homeಕೊಡಗುಹಾಡಹಗಲೇ ಬೆಚ್ಚಿ ಬಿದ್ದ ಕೊಡಗಿನ ಜನ; ಕತ್ತಿಯಿಂದ ಕಡಿದು ನಾಲ್ವರ ಭೀಕರ ಕೊಲೆ

ಹಾಡಹಗಲೇ ಬೆಚ್ಚಿ ಬಿದ್ದ ಕೊಡಗಿನ ಜನ; ಕತ್ತಿಯಿಂದ ಕಡಿದು ನಾಲ್ವರ ಭೀಕರ ಕೊಲೆ

- Advertisement -
- Advertisement -

ಮಡಿಕೇರಿ: ಹಾಡಹಗಲೇ ಕೊಡಗಿನ ಜನ ಬೆಚ್ಚಿ ಬಿದ್ದಿದ್ದಾರೆ.  ಕತ್ತಿಯಿಂದ ಕಡಿದು ನಾಲ್ವರನ್ನು ಭೀಕರವಾಗಿ ಕೊಲೆ  ಮಾಡಲಾಗಿದೆ.

ಕೊಡಗು ಜಿಲ್ಲೆಯ ಪೊನ್ನಂಪೇಟೆಯ  ಬೇಗೂರು ಸಮೀಪದ ಕೊಳತೋಡು ಗ್ರಾಮದಲ್ಲಿ ಘಟನೆ ನಡೆದಿದೆ.ಕರಿಯ (75) ಗೌರಿ (70) ನಾಗಿ (35) ಹಾಗೂ ಕಾವೇರಿ (7) ಕೊಲೆಯಾದವರು. ಗಿರೀಶ್ (35) ಹತ್ಯೆಗೈದ ಆರೋಪಿ.

ಕೊಲೆ ಮಾಡಿ ಆರೋಪಿ ಗಿರಿ ಪರಾರಿಯಾಗಿದ್ದು ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಅನೈತಿಕ ಸಂಬಂಧದ ಹಿನ್ನೆಲೆ ಈ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ. ಈ ಕುಟುಂಬ ಕಾಫಿ ತೋಟದ ಮನೆಯಲ್ಲಿ ವಾಸವಿತ್ತು. ಸ್ಥಳಕ್ಕೆ ಕೊಡಗು ಎಸ್ಪಿ ರಾಮರಾನ್ ಭೇಟಿ ನಿಡಿ, ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!