- Advertisement -
- Advertisement -
ಉಡುಪಿ: ಖ್ಯಾತ ಭಾಗವತ ಗಣೇಶ ಹೆಬ್ರಿ ಅವರ ಪುತ್ರ ಅಮೃತ ರಾಜ್ ನಿಧನರಾಗಿದ್ದಾರೆ. 21 ವರ್ಷದ ಅಮೃತ್ ರಾಜ್ ಅನಾರೋಗ್ಯದಿಂದಾಗಿ ನಿಧನರಾಗಿದ್ದಾರೆ.
ಮಂಗಳೂರಿನ ಮೆಡಿಕಲ್ ಕಾಲೇಜಿನಲ್ಲಿ ಫಿಜಿಯೋಥೆರಪಿ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಅಮೃತ್ ಅನಾರೋಗ್ಯ ಹಿನ್ನೆಲೆ ಓದನ್ನು ಮೊಟಕುಗೊಳಿಸಿದ್ದರು. ಅನಂತರ ಅನಾರೋಗ್ಯ ಉಲ್ಬಣಗೊಂಡು ಚಿಕಿತ್ಸೆ ಪಡೆಯುತ್ತಿದ್ದವರು. ಆದರೆ ಚಿಕಿತ್ಸೆ ಫಲಿಸದೇ ವಿಧಿವಶರಾಗಿದ್ದಾರೆ. ಅವರು ತಂದೆ, ತಾಯಿ ಹಾಗೂ ಸಹೋದರನನ್ನು ಅಗಲಿದ್ದಾರೆ. ಅಗಲಿದ ಮಗನ ದೇಹವನ್ನು ಭಾಗವತ ಗಣೇಶ ಅವರು ವೈದ್ಯಕೀಯ ಶಿಕ್ಷಣಕ್ಕೆ ಕೆಎಂಸಿ ಆಸ್ಪತ್ರೆಗೆ ದಾನ ಮಾಡಿದ್ದಾರೆ.
- Advertisement -