- Advertisement -
- Advertisement -
ಮಡಿಕೇರಿ: ಇಲ್ಲಿನ ಮನೆಯೊಂದರ ದನದ ಕೊಟ್ಟಿಗೆಗೆ ನುಗ್ಗಿ ಕಳ್ಳರು ಒಂದು ಹಸುವನ್ನು ಕದ್ದೊಯ್ದಿರುವ ಘಟನೆ ನಡೆದಿದೆ.
ಗ್ರಾಮಾಂತರ ಠಾಣಾ ಸರಹದ್ದಿನ ಕೆ.ಜಿಡುಗಣೆ ಗ್ರಾಮದ ಬಿ.ಎಂ. ದೇವಯ್ಯ ಅವರ ಮನೆಯ ಹಸು ಕಳವಾಗಿದೆ.
ಮನೆಯವರು ಬೆಳಗ್ಗೆ ಎದ್ದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದ್ದು, ಕಳ್ಳರು ವಾಹನವೊಂದರಲ್ಲಿ ಹಸುವನ್ನು ಸಾಗಿಸಿರುತ್ತಾರೆಂದು ಮಡಿಕೇರಿ ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿದೆ.
ದೂರು ದಾಖಲಿಸಿಕೊಂಡಿರುವ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
- Advertisement -