- Advertisement -
- Advertisement -
ಉಡುಪಿ : ಹೆಜಮಾಡಿ ಟೋಲ್ ಗೇಟ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಬಂಟ್ವಾಳದ ಯುವಕನನ್ನು ಅರೆಸ್ಟ್ ಮಾಡಲಾಗಿದೆ. ಬಂಟ್ವಾಳ ನಿವಾಸಿ ಸಲೀಂ ಬಂಧಿತ ಆರೋಪಿ.
ಆರೋಪಿ ಸಲೀಂ ಹೆಜಮಾಡಿ ಟೋಲ್ ಗೇಟ್ ನ ಬಿಲ್ ಕಲೆಕ್ಟರ್ ದೀಕ್ಷಿತ್ ಮೇಲೆ ಹಲ್ಲೆ ಮಾಡಿದ್ದ. ಮಂಗಳವಾರ ಬೆಳಗ್ಗೆ ಮುಲ್ಕಿ ಕಡೆಯಿಂದ ಕಾರಿನಲ್ಲಿ ಹೆಜಮಾಡಿ ಟೋಲ್ ಗೇಟ್ ಗೆ ಬಂದ ಸಲೀಂ, ಟೋಲ್ ವಿನಾಯಿತಿ ಕೋರಿದ್ದಾನೆ. ವಿನಾಯಿತಿ ನೀಡಲು ಅವಕಾಶ ಇಲ್ಲ ಎಂದು ಬಿಲ್ ಕಲೆಕ್ಟರ್ ದೀಕ್ಷಿತ್ ಹೇಳಿದಾಗ ಕಾರನ್ನು ಅಪಾಯಕಾರಿಯಾಗಿ ಮುಂದಕ್ಕೆ ಚಲಾಯಿಸಿದ್ದಾನೆ. ಅಲ್ಲದೆ ಕಾರಿನಿಂದ ಇಳಿದು ಅವ್ಯಾಚವಾಗಿ ನಿಂದಿಸಿ ಹಲ್ಲೆ ನಡೆಸಿರುವುದಾಗಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ದೀಕ್ಷಿತ್ ಆರೋಪಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪಡುಬಿದ್ರೆ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
- Advertisement -