Thursday, May 2, 2024
Homeಕರಾವಳಿಗುತ್ತಿಗಾರು: ನವೋದಯ ಶಾಲೆಗೆ ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ಬಹುಮಾನ

ಗುತ್ತಿಗಾರು: ನವೋದಯ ಶಾಲೆಗೆ ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ಬಹುಮಾನ

spot_img
- Advertisement -
- Advertisement -

ಗುತ್ತಿಗಾರು: ಶ್ರೀ ದುರ್ಗಾ ತರಭೇತಿ ಕೇಂದ್ರ ಗುತ್ತಿಗಾರು ಇಲ್ಲಿ ನವೋದಯ ಮತ್ತು ಮೊರಾರ್ಜಿ ಶಾಲೆಗೆ ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ಬಹುಮಾನ ವಿತರಿಸಲಾಯಿತು.

ಸಂಪಾಜೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ವೈ ಕೆ ಮಾಲತಿ ಹಾಗೂ ಕೆನರಾ ಬ್ಯಾಂಕ್ ನಿವೃತ್ತ ಉದ್ಯೋಗಿ ಶ್ರೀ ಮೋಹನ್ ದಾಸ್ ದಂಪತಿಗಳು, ಶ್ರೀ ದುರ್ಗಾ ತರಭೇತಿ ಕೇಂದ್ರ ಗುತ್ತಿಗಾರು ಇಲ್ಲಿ ತರಭೇತಿ ಪಡೆದು ನವೋದಯ ಹಾಗೂ ಮೊರಾರ್ಜಿ ಶಾಲೆಗೆ ಆಯ್ಕೆಗೊಂಡ ನಾಲ್ಕು ಜನ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ಬಹುಮಾನ ವಿತರಿಸಿದರು.

ಕಳೆದ ಬಾರಿ ಆಯ್ಕೆಯಾದ ಅನ್ವಿ ವೈ ಯನ್(ನವೋದಯ), ಜೀವಿತ ಎಂ ಎಸ್(ಮೊರಾರ್ಜಿ), ಸಂಶಿತ್ ಡಿ(ಮೊರಾರ್ಜಿ) ಹಾಗೂ ಈ ಬಾರಿ ನವೋದಯ ಕ್ಕೆ ಆಯ್ಕೆಯಾದ ಕು. ರಚನಾ ಕೋಲ್ಚಾರ್ ಇವರಿಗೆ ನಗದು ಪ್ರೋತ್ಸಾಹಕ ನೀಡಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶ್ರೀ ದುರ್ಗಾ ಕಂಪ್ಯೂಟರ್ ನ ಶ್ರೀಮತಿ ದಿವ್ಯಾ ಸುಜನ್ ಗುಡ್ಡೆಮನೆ, ಶ್ರೀಮತಿ ಅಭಿಲಾಷ, ಬಾಲಕೃಷ್ಣ ಗೌಡ ಮಡಪ್ಪಾಡಿ, ಶ್ರೀಮತಿ ಅಶ್ವಿನಿ ವೈ.ಏನ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!