- Advertisement -
- Advertisement -
ಕೇರಳ: ಸಾಮಾನ್ಯ ಮಹಿಳೆಯಂತೆ ದೇವಸ್ಥಾನದಲ್ಲಿ ಕೂತು ಸುಧಾಮೂರ್ತಿ ಪೊಂಗಲ್ ತಯಾರಿಸಿದ ಫೋಟೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಂಗಳವಾರ ತಿರುವನಂತಪುರಂನ ಅಟ್ಟುಕಲ್ ಭಗವತಿ ದೇವಸ್ಥಾನದ ಪ್ರಸಿದ್ಧ ಪೊಂಗಲ ಹಬ್ಬದಲ್ಲಿ ಸಾವಿರಾರು ಮಹಿಳೆಯರು ಭಾಗಿಯಾಗಿದ್ದರು. ಅದರಲ್ಲಿ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ ಅವರು ಕೂಡ ಒಬ್ಬರು.
ಸಾವಿರಾರು ಮಹಿಳೆಯರ ನಡುವೆ ಕುಳಿತು ಸುಧಾಮೂರ್ತಿ ದೇವರಿಗೆ ಪೊಂಗಲ್ ತಯಾರಿಸಿ ಅರ್ಪಿಸಿದರು.ಸುಧಾ ಮೂರ್ತಿ ಅವರು ದೇವಸ್ಥಾನದ ಬಳಿ ಬರಿ ನೆಲದ ಮೇಲೆ ಕುಳಿತು ಸುಡುವ ಬಿಸಿಲಿನಲ್ಲಿ ನೈವೇದ್ಯವನ್ನು ಸಿದ್ಧಪಡಿಸುತ್ತಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
- Advertisement -