Friday, June 27, 2025
Homeತಾಜಾ ಸುದ್ದಿಏರ್ ಪೋರ್ಟ್ ನಲ್ಲಿ ವಿಮಾನದ ಪೈಲಟ್ ಗಳಿಗಾಗಿ ಕಾಯ್ದು ಕುಳಿತ ಸಿಎಂ ಮತ್ತು‌ ಮಾಜಿ ಸಿಎಂ!

ಏರ್ ಪೋರ್ಟ್ ನಲ್ಲಿ ವಿಮಾನದ ಪೈಲಟ್ ಗಳಿಗಾಗಿ ಕಾಯ್ದು ಕುಳಿತ ಸಿಎಂ ಮತ್ತು‌ ಮಾಜಿ ಸಿಎಂ!

spot_img
- Advertisement -
- Advertisement -

ಲ್ಬುರ್ಗಿ: ವಿಮಾನದ ಪೈಲಟ್ ಗಳಿಗಾಗಿ ಸಿಎಂ ಮತ್ತು ಮಾಜಿ ಸಿಎಂ ಏರ್ ಪೋರ್ಟ್ ನಲ್ಲಿ ಕಾಯ್ದು ಕುಳಿತ ಘಟನೆ ಇಂದು ಕಲ್ಬುರ್ಗಿಯಲ್ಲಿ ನಡೆದಿದೆ. ಕಲ್ಬುರ್ಗಿ ಏರ್‌ಪೋರ್ಟ್ ನಲ್ಲಿ ವಿಶೇಷ ವಿಮಾನದ ಪೈಲಟ್ ಗಳಿಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಪ್ಪತ್ತು ನಿಮಿಷಗಳ ಕಾಲ ಕಾಯ್ದು ಕುಳಿತಿದ್ದಾರೆ.

ಕಲ್ಬುರ್ಗಿಯಲ್ಲಿ ಇಂದು ನಡೆದಿದ್ದ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಛಾದ ಸಮಾವೇಶಕ್ಕೆ ಬೆಂಗಳೂರಿನಿಂದ ಇಂದು ಬೆಳಗ್ಗೆ ವಿಶೇಷ ವಿಮಾನದಲ್ಲಿ ಕಲ್ಬುರ್ಗಿಗೆ ಸಿಎಂ ಬೊಮ್ಮಾಯಿ‌ ಮತ್ತು ಮಾಜಿ ಸಿಎಂ ಯಡಿಯೂರಪ್ಪ ಜೊತೆಯಾಗಿಯೇ ತೆರಳಿದ್ದರು. ಆದರೆ ಸಂಜೆ ಸಮಾವೇಶ ಮುಗಿಸಿ ಮರಳಿ ಬೆಂಗಳೂರಿಗೆ ತೆರಳುವ ವೇಳೆ ಈ ಘಟನೆ ನಡೆದಿದೆ.

ಸಿಎಂ ಮತ್ತು ಮಾಜಿ ಸಿಎಂ ಕಾಯ್ದು ಕುಳಿತಿರುವುದನ್ನು ತಿಳಿದು ತರಾತುರಿಯಲ್ಲಿ ಪೈಲಟ್ ಗಳು ಓಡೋಡಿ ಬಂದಿದ್ದಾರೆ. ನಂತರ ಸಿಎಂ ಬೊಮ್ಮಾಯಿ‌ ಮತ್ತು ಮಾಜಿ ಸಿಎಂ ಯಡಿಯೂರಪ್ಪ ವಿಶೇಷ ವಿಮಾನದಲ್ಲಿ ಕಲ್ಬುರ್ಗಿಯಿಂದ ಬೆಂಗಳೂರಿಗೆ ವಾಪಸಾಗಿದ್ದಾರೆ.

- Advertisement -
spot_img

Latest News

error: Content is protected !!