Saturday, June 28, 2025
Homeತಾಜಾ ಸುದ್ದಿಕಾರು ಅಡ್ಡಗಟ್ಟಿ 45.5 ಲಕ್ಷ ರೂ. ದರೋಡೆ, ಕದ್ದ ಹಣವನ್ನು ಎಲ್ಲಿ ಬಚ್ಚಿಟ್ಟಿದ್ದ ಗೊತ್ತಾ?

ಕಾರು ಅಡ್ಡಗಟ್ಟಿ 45.5 ಲಕ್ಷ ರೂ. ದರೋಡೆ, ಕದ್ದ ಹಣವನ್ನು ಎಲ್ಲಿ ಬಚ್ಚಿಟ್ಟಿದ್ದ ಗೊತ್ತಾ?

spot_img
- Advertisement -
- Advertisement -

ಬೆಂಗಳೂರು: ಒಂದೂವರೆ ತಿಂಗಳ ಹಿಂದೆ ರಸ್ತೆಯಲ್ಲಿ ಕಾರು ಅಡ್ಡಗಟ್ಟಿ 45.5 ಲಕ್ಷ ರೂಪಾಯಿ ಸುಲಿಗೆ ಮಾಡಿದ್ದ ದುಷ್ಕರ್ಮಿಗಳು ಆ ಹಣವನ್ನು ಟೈರ್​ನಲ್ಲಿ ಬಚ್ಚಿಟ್ಟು ಇದೀಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಜೂ.11ರ ಸಂಜೆ ಐಟಿಸಿ ಕಂಪನಿಯ ಡಿಸ್ಟ್ರಿಬ್ಯೂಟರ್ ರಾಕೇಶ್​ ಪೋಕರ್ಣ ಅವರು ಕಲೆಕ್ಸನ್​ ಹಣವನ್ನು ಇಟ್ಟುಕೊಂಡು ಕಾರಿನಲ್ಲಿ ಹೋಗುತ್ತಿದ್ದರು. ಈ ಕಂಪನಿಯ ಮಾಜಿ ಉದ್ಯೋಗಿ ಮಹಮ್ಮದ್ ಇಷಾಕ್ ರಾಕೇಶ್​ ಪೋಕರ್ಣ ಬಳಿಯ ಹಣ ದೋಚಲು ಸ್ಕೆಚ್ ಹಾಕಿದ್ದ. ಅದರಂತೆ ಅಂದು ಸಂಜೆ ಮಹಮದ್ ಇಶಾಕ್ ನೇತೃತ್ವದ ಗುಂಪೊಂದು ಸಿಚಡ್ಸ್ ಟೌನ್​ನ ಪಾಟರಿ ರಸ್ತೆಯಲ್ಲಿ ರಾಕೇಶ್​ರ ಕಾರನ್ನು ಅಡ್ಡಗಟ್ಟಿ ಚಾಕು ತೋರಿಸಿ ಕಾರಿನಲ್ಲಿದ್ದ ನಲವತ್ತೈದು ಲಕ್ಷ ರೂಪಾಯಿಯನ್ನು ದೋಚಿತ್ತು.

ಸಿಗರೇಟ್ ವಿತರಕನ ಸುಲಿಗೆ ಪ್ರಕರಣ ಪುಲಿಕೇಶಿ ನಗರ ಠಾಣೆಯಲ್ಲಿ ದಾಖಲಾಗಿತ್ತು. ಆರೋಪಿಗಳ ಪತ್ತೆಗೆ ಉಪ ಪೊಲೀಸ್​ ಆಯುಕ್ತ ಡಾ. ಎಸ್​.ಡಿ.ಶರಣಪ್ಪ ಮಾರ್ಗದರ್ಶನದಲ್ಲಿದರೋಡೆಕೋರರಿಂದ ವಶಪಡಿಸಿಕೊಂಡ ಹಣದೊಂದಿಗೆ ಪೊಲೀಸ್​ ಸಿಬ್ಬಂದಿ.

ಪುಲಕೇಶಿನಗರ ಉಪವಿಭಾಗ ಸಹಾಯಕ ಪೊಲೀಸ್​ ಆಯುಕ್ತೆ ತಬರಾಕ್​ ಫಾತೀಮಾ ನೇತೃತ್ವದ ತಂಡ ಬಲೆ ಬೀಸಿತ್ತು. ಕಾರ್ಯಾಚರಣೆ ನಡೆಸಿದ ಪೊಲೀಸರು ನಾಲ್ವರು ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಆರೋಪಿಗಳಾದ ಮಹಮದ್ ಇಶಾಕ್, ಮಹಮದ್ ಫರ್ವೇಜ್, ಮಹಮದ್ ಅದ್ನಾನ್, ಅಫ್ನಾನ್ ಪಾಷಾ ಬಂಧಿತರು. ಮಹಮದ್ ಇಶಾಕ್ ಐಟಿಸಿ ಕಂಪನಿಯ ಹಳೇ ಉದ್ಯೋಗಿಯಾಗಿದ್ದ. ಡಿಸ್ಟ್ರಿಬ್ಯೂಟರ್​ನ ಚಲನವಲನಗಳ ಬಗ್ಗೆ ಅಬ್ಸರ್ವ್ ಮಾಡಿದ್ದ ಇಶಾಕ್ ಹಣ ಸುಲಿಗೆಗೆ ಯೋಜನೆ ರೂಪಿಸಿದ್ದ. ಕಾರಿಗೆ ಬೈಕ್​ನಲ್ಲಿ ಅಡ್ಡಗಟ್ಟಿ ದೋಚಿದ್ದ ಹಣವನ್ನು ನಾಲ್ವರೂ ಹಂಚಿಕೆ ಮಾಡಿಕೊಂಡಿದ್ದರು. ಪ್ರಮುಖ ಆರೋಪಿ ಮೊಹಮದ್ ಇಶಾಕ್​ ತನ್ನ ಪಾಲಿನ ಹಣವನ್ನು ಬೇತಮಂಗಲದ ಸಹೋದರಿಯ ಮನೆಯಲ್ಲಿ ಕಾರಿನ ಟೈಯರ್​ ಒಳಗೆ ಬಚ್ಚಿಟ್ಟಿದ್ದ. ಇನ್ನಿತರ ಆರೋಪಿಗಳು ಸ್ನೇಹಿತರ ಮನೆಯಲ್ಲಿ ಹಣ ಬಚ್ಚಿಟ್ಟಿದ್ದರು. ದರೋಡೆ ಮಾಡಿದ್ದ 45.5 ಲಕ್ಷ ರೂ. ಪೈಕಿ 31.86 ಲಕ್ಷ ರೂ. ನಗದು ಪೊಲೀಸರ ಕೈಗೆ ಸಿಕ್ಕಿದೆ.

- Advertisement -
spot_img

Latest News

error: Content is protected !!