- Advertisement -
- Advertisement -
ಚಿಕ್ಕಮಗಳೂರು: ಈಜಲು ತೆರಳಿದ ಮೂವರು ಯುವಕರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಅಣ್ಣೆಗೆರೆ ಎಂಬಲ್ಲಿ ನಡೆದಿದೆ. ದರ್ಶನ್ (16), ರಾಕೇಶ್ (18), ಕಿರಣ್ (20) ನೀರುಪಾಲಾದ ಯುವಕರು.
ಬಿಟ್ಟೇನಹಳ್ಳಿ ಗ್ರಾಮದಿಂದ 6 ಮಂದಿ ಗೆಳೆಯರು ಕೆರೆಯಲ್ಲಿ ಈಜಲು ತೆರಳಿದ್ದರು. ಈಜುವ ವೇಳೆ ಅಲೆಯ ರಭಸಕ್ಕೆ ಮೂವರು ನೀರುಪಾಲಾಗಿದ್ದಾರೆ.ಸ್ಥಳಕ್ಕೆ ಅಗ್ನಿ ಶಾಮಕದಳ, ಪೊಲೀಸ್ ಸಿಬ್ಬಂದಿ ಆಗಮಿಸಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ
- Advertisement -