ತುಮಕೂರಿನಲ್ಲೊಂದು ಹೃದಯವಿದ್ರಾವಕ ಘಟನೆ ನಡೆದಿದೆ. ಒಂದೇ ಮನೆಯಲ್ಲಿ ಮೂವರು ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಇಲ್ಲಿನ ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಹೋಬಳಿಯಲ್ಲಿ ಈ ಘಟನೆ ನಡೆದಿದ್ದು, ಅಕ್ಕ-ತಂಗಿಯರಾದ ರಂಜಿತಾ (24), ಬಿಂದು(21), ಚಂದನಾ (18) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಂಜಿತಾ, ಬಿಂದು ಮತ್ತು ಚಂದನಾ ಅವರು ಚಿಕ್ಕ ವಯಸ್ಸಲ್ಲೇ ತಂದೆ-ತಾಯಿಯನ್ನ ಕಳೆದುಕೊಂಡಿದ್ದರು. 10 ವರ್ಷದ ಹಿಂದೆಯೇ ತಂದೆ-ತಾಯಿ ನಿಧನರಾದ ಹಿನ್ನೆಲೆ ಮೂವರು ಮಕ್ಕಳನ್ನೂ ಅಜ್ಜಿ ಸಾಕುತ್ತಿದ್ದರು. ರಂಜಿತಾ ಮತ್ತು ಬಿಂದು ಇಬ್ಬರೂ ಕೆ.ಬಿ.ಕ್ರಾಸ್ನ ಗಾರ್ಮೆಂಟ್ಸ್ವೊಂದರಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಚಂದನಾ ವಿದ್ಯಾಭ್ಯಾಸ ಮಾಡುತ್ತಿದ್ದಳು.ಇವರಿಗೆ ಆಸರೆಯಾಗಿದ್ದ ಅಜ್ಜಿ 3 ತಿಂಗಳ ಹಿಂದೆ ಕೊನೆಯುಸಿರೆಳೆದಿದ್ದರು.ಮೊದಲೇ ಅಪ್ಪ-ಅಮ್ಮನನ್ನು ಕಳೆದುಕೊಂಡು ಕಂಗೆಟ್ಟಿದ್ದ ಈ ಮಕ್ಕಳಿಗೆ ಅಜ್ಜಿಯ ಸಾವು ಭಾರೀ ಆಘಾತ ನೀಡಿತ್ತು.
ಅನಾಥ ಭಾವನೆ ಕಾಡುತ್ತಿದ್ದ ನೋವಲ್ಲೇ ಮೂವರು ಬಾಲದೇವರಹಟ್ಟಿಯಿಂದ ಬರಕನಹಾಲ್ ತಾಂಡಾಕ್ಕೆ ಹೋಗುವ ದಾರಿಯ ರಸ್ತೆ ಬದಿಯಲ್ಲಿರುವ ಒಂಟಿ ಮನೆಯಲ್ಲಿ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.