- Advertisement -
- Advertisement -
ಮಂಗಳೂರು: ಮೀನುಗಾರಿಕೆಯು ಕರಾವಳಿ ಕರ್ನಾಟಕದ ಆರ್ಥಿಕ ಹೆಬ್ಬಾಗಿಲಾಗಿದ್ದು, ಈ ನಿಟ್ಟಿನಲ್ಲಿ ಬಹು ಆಯಾಮದಲ್ಲಿ ಬಳಕೆಗೆ ಯೋಗ್ಯವಾಗಿಸುವ ಮಹತ್ವದ ಬಹೂಪಯೋಗಿ ಬಂದರು (ಮಲ್ಟಿ- ಪರ್ಪಸ್ ಹಾರ್ಬರ್) ಯೋಜನಾ ಪ್ರಸ್ತಾವನೆ ಯೊಂದು ಕೇಂದ್ರ ಸರ ಕಾರಕ್ಕೆ ಸಲ್ಲಿಕೆಯಾಗಿದೆ.
ಉಡುಪಿ ಜಿಲ್ಲೆಯ ಬೈಂದೂರು ಮತ್ತು ಮಲ್ಪೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿ ನಲ್ಲಿ ಈ ಬಹೂಪಯೋಗಿ ಬಂದರು ಅಭಿವೃದ್ಧಿ ಪಡಿಸುವ ಯೋಜನೆಯ ವಿಸ್ಕೃತ ಯೋಜನಾ ವರದಿಯನ್ನು ರಾಜ್ಯದ ಜಲಸಾರಿಗೆ ಮಂಡಳಿ ಕೇಂದ್ರ ಸರಕಾರದ ಸಾಗರಮಾಲಾ ಕೋಶಕ್ಕೆ ಅನುಮೋದನೆಗಾಗಿ ಸಲ್ಲಿಸಿದೆ.
ಲಾಭವೇನು?; ಹಾಲಿ ಬಂದರನ್ನು ಪ್ರವಾಸೋದ್ಯಮ, ಕೈಗಾರಿಕೆ ಸ್ನೇಹಿಯಾಗಿ ರೂಪಿಸಿದರೆ ಆರ್ಥಿಕ ಚಟುವಟಿಕೆಯ ತಾಣವಾಗಲಿದೆ. ಪ್ರಯಾಣಿಕ ಬೋಟ್ ವ್ಯವಸ್ಥೆಯನ್ನು ಪರಿಚಯಿ ಸುವ ಸಾಧ್ಯತೆಗಳಿವೆ. ಸ್ಥಳೀಯ ವ್ಯಾಪಾರ-ವಹಿವಾಟು, ಉದ್ಯೋ ಗಕ್ಕೆ ಅನುಕೂಲ. ಸರ್ವ ವಿಧದಲ್ಲಿಯೂ ಬಂದರು ಜನರಿಗೆ ಸಿಗುವಂತಾಗುವುದು ಈ ಪರಿಕಲ್ಪನೆಯ ಉದ್ದೇಶ.
- Advertisement -