Wednesday, May 15, 2024
Homeತಾಜಾ ಸುದ್ದಿ12 ಕೋಟಿ ರೂ. ಬಂಪರ್ ಲಾಟರಿ: ದೇಗುಲದಲ್ಲಿ ಕೆಲಸ ಮಾಡುವ ಯುವಕ ಈಗ ಕೋಟ್ಯಾಧಿಪತಿ!

12 ಕೋಟಿ ರೂ. ಬಂಪರ್ ಲಾಟರಿ: ದೇಗುಲದಲ್ಲಿ ಕೆಲಸ ಮಾಡುವ ಯುವಕ ಈಗ ಕೋಟ್ಯಾಧಿಪತಿ!

spot_img
- Advertisement -
- Advertisement -

ತಿರುವನಂತಪುರಂ: ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬನಿಗೆ ಬರೋಬ್ಬರಿ 12 ಕೋಟಿ ರೂ. ಲಾಟರಿ ಹೊಡೆದು ಕೋಟ್ಯಾಧಿಪತಿಯಾಗಿರುವ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ.

ಕೊಚ್ಚಿಯ ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ 24 ವರ್ಷದ ಅನಂತು ವಿಜಯನ್ ಎಂಬಾತನಿಗೆ ಭಾನುವಾರ ಬೆಳಗ್ಗೆ 12 ಕೋಟಿ ರೂ. ಗಳ ಲಾಟರಿ ಹೊಡೆದಿದ್ದು, ಒಂದೇ ದಿನದಲ್ಲಿ ಅನಂತು ಕೋಟ್ಯಾಧಿಪತಿಯಾಗಿದ್ದಾನೆ.

ಲಾಕ್ ಡೌನ್ ಬಳಿಕ ಅನಂತ ಕೆಲಸ ಕಳೆದುಕೊಂಡು ಸಂಕಷ್ಟದಲ್ಲಿದ್ದ. ಈ ವೇಳೆ ತನ್ನ ಅದೃಷ್ಟ ಪರೀಕ್ಷೆ ಮಾಡಿಸಿಕೊಳ್ಳಲು ನಿರ್ಧರಿಸಿದ ಅನಂತು ಲಾಟರಿ ಟಿಕೆಟ್ ಖರೀದಿಸಿದ್ದ. ನಿನ್ನೆ ಸಂಜೆ 5.30 ಕ್ಕೆ ಲಾಟರಿಯ ಫಲಿತಾಂಶ ಪ್ರಕಟವಾಗಿದ್ದು, ತಾನು ಖರೀದಿಸಿದ ಲಾಟರಿ ಬಹುಮಾನ ಬಂದಿದೆ.

ಪಾರ್ಟ್​ ಟೈಂ ಕೆಲಸ ಮಾಡುತ್ತಾ ತನ್ನ ಗೆ ತಾನೇ ಹಣ ಹೊಂದಿಸಿಕೊಂಡಿದ್ದ ಅನಂತು ಕಳೆದ 2 ವರ್ಷಗಳಿಂದ ಎರ್ನಾಕುಲಂನ ಪೊನ್ನೆತ್ ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ. ಲಾಟರಿಯ ಬಹುಮಾನದ ಹಣ ಕೈಸೇರುವವರೆಗೂ ದೇವಸ್ಥಾನದಲ್ಲಿಯೇ ಕೆಲಸ ಮಾಡಲು ಅನಂತು ನಿರ್ಧರಿಸಿದ್ದಾನೆ. ಸರ್ಕಾರದ ಟ್ಯಾಕ್ಸ್​ ಎಲ್ಲ ಕಳೆದು ಅನಂತು ಕೈಗೆ 7.57 ಕೋಟಿ ರೂ. ಸಿಗಲಿದೆ. ಹಾಗೇ, ಲಾಟರಿ ಟಿಕೆಟ್ ಮಾರಿದ ಅಲಗಾರ್ ಸ್ವಾಮಿ ಎಂಬುವವರಿಗೆ ಕಮಿಷನ್ ರೂಪದಲ್ಲಿ 1.20 ಕೋಟಿ ರೂ. ಸಿಗಲಿದೆ.

- Advertisement -
spot_img

Latest News

error: Content is protected !!