Sunday, April 28, 2024
Homeಕರಾವಳಿಉಡುಪಿದಕ್ಷಿಣಕನ್ನಡದಲ್ಲಿ ಕೊರೊನಾ ರಣಕೇಕೆ, ಇಂದು 238 ಮಂದಿಗೆ ಕೊರೊನಾ ಪಾಸಿಟಿವ್, 7 ಮಂದಿ ಹೆಮ್ಮಾರಿಗೆ ಬಲಿ...

ದಕ್ಷಿಣಕನ್ನಡದಲ್ಲಿ ಕೊರೊನಾ ರಣಕೇಕೆ, ಇಂದು 238 ಮಂದಿಗೆ ಕೊರೊನಾ ಪಾಸಿಟಿವ್, 7 ಮಂದಿ ಹೆಮ್ಮಾರಿಗೆ ಬಲಿ ಉಡುಪಿಯಲ್ಲಿ 109 ಕೇಸುಗಳು ಪತ್ತೆ

spot_img
- Advertisement -
- Advertisement -

ಮಂಗಳೂರು : ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ನಿನ್ನೆ ಹಾಗೂ ಮೊನ್ನೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪತ್ತೆಯಾದ ಕೊರೊನಾ ಕೇಸುಗಳ ಸಂಖ್ಯೆ ಜನರಿಗೆ ಕೊಂಚ ನೆಮ್ಮದಿ ಮೂಡಿಸಿತ್ತು. ಪರವಾಗಿಲ್ಲ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ ಅನ್ನೋ ಸಮಾಧಾನಾ ಮೂಡಿಸಿತ್ತು.ಆದರೆ ಇವತ್ತು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪತ್ತೆಯಾದ ಕೋವಿಡ್ ಪ್ರಕರಣಗಳ ಸಂಖ್ಯೆ ನೋಡಿದ್ರೆ ಎಂತಹವರಾದ್ರೂ ಬೆಚ್ಚಿ ಬೀಳುವಂತಿದೆ.

ಇಂದು ಒಂದೇ ದಿನ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಬರೋಬ್ಬರ 238 ಕೇಸುಗಳು ಪತ್ತೆಯಾಗಿವೆ. ಹಾಗೇ ಜಿಲ್ಲೆಯಲ್ಲಿ 7 ಮಂದಿ ಇವತ್ತು ಕೊರೊನಾಗೆ ಬಲಿಯಾಗಿದ್ದಾರೆ. ಇದುವೆರಗೂ ಜಿಲ್ಲೆಯಲ್ಲಿ ಒಟ್ಟು 2758 ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ 946 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 1758 ಸಕ್ರೀಯ ಪ್ರಕರಣಗಳಿವೆ. ಇದುವರೆಗೂ ಜಿಲ್ಲೆಯಲ್ಲಿ 52 ಮಂದಿಯನ್ನು ಕೋವಿಡ್ ಬಲಿ ಪಡೆದುಕೊಂಡಿದೆ.

ಇನ್ನು ಉಡುಪಿಯಲ್ಲೂ ಕೂಡ ಇಂದು ಬರೋಬ್ಬರಿ 109 ಕೇಸುಗಳು ಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ. ಇದುವರೆಗೂ ಕೃಷ್ಣ ನಗರಿಯಲ್ಲಿ 1900 ಪ್ರಕರಣಗಳು ವರದಿಯಾಗಿದ್ದು, 1451 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಸದ್ಯ ಉಡುಪಿಯಲ್ಲಿ 446 ಪ್ರಕರಣಗಳಿದ್ದು, 3 ಮಂದಿಗೆ ಕೊರೊನಾದಿಂದಾಗಿ ಸಾವನ್ನಪ್ಪಿದ್ದಾರೆ.

- Advertisement -
spot_img

Latest News

error: Content is protected !!