- Advertisement -
- Advertisement -
ಬೆಂಗಳೂರು : ಚಂದನ್ ಶೆಟ್ಟಿ ನಿವೇದಿತಾ ಗೌಡ ಡಿವೋರ್ಸ್ ನ ಶಾಕಿಂಗ್ ಸುದ್ದಿಯಿಂದ ಹೊರ ಬರುವ ಮೊದಲೇ ಇದೀಗ ಸ್ಯಾಂಡಲ್ ವುಡ್ ನ ಮತ್ತೊಂದು ಬೆನ್ನಲ್ಲೇ ಮತ್ತೊಂದು ಜೋಡಿ ಡಿವೋರ್ಸ್ ಗಾಗಿ ಅರ್ಜಿಸಲ್ಲಿಸಿದ್ದಾರೆ, ನಟ ಯುವರಾಜ್ ಕುಮಾರ್ ಹಾಗೂ ಅವರ ಶ್ರೀದೇವಿ ಬೈರಪ್ಪ ಡಿವೋರ್ಸ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ.
ಕಳೆದ ಆರು ತಿಂಗಳಿನಿಂದ ಪತ್ನಿ ಶ್ರೀದೇವಿಯಿಂದ ದೂರವಿರುವ ನಟ ಯುವರಾಜ್ ಕುಮಾರ್ ಅವರು ವಿಚ್ಚೇದನಕ್ಕೆ ಫ್ಯಾಮೀಲಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಯುವ ರಾಜ್ಕುಮಾರ್ 2019 ಮೇ 26ರಂದು ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ನಲ್ಲಿ ಶ್ರೀದೇವಿ ಭೈರಪ್ಪ ಎಂಬುವವರನ್ನು ಮದುವೆಯಾದರು. ಶ್ರೀದೇವಿ ಮೂಲತಃ ಮೈಸೂರಿನವರು. ಇವರಿಬ್ಬರು ಏಳು ವರ್ಷಗಳಿಂದ ಪರಸ್ಪರ ಸ್ನೇಹಿತರಾಗಿದ್ದರು. ಈ ಸ್ನೇಹ ಪ್ರೀತಿಗೆ ತಿರುಗಿ ಮದುವೆಯಾದರು. ರಾಜ್ ಕುಮಾರ್ ಐಎಎಸ್ ಅಕಾಡೆಮಿಯಲ್ಲಿ ಶ್ರೀದೇವಿ ಕೆಲಸ ಮಾಡುತ್ತಿದ್ದರು. ಅಲ್ಲಿ ಅವರನ್ನು ಪ್ರೀತಿಸಿ ಯುವ ಮದುವೆಯಾಗಿದ್ರು.
- Advertisement -