Thursday, May 2, 2024
Homeಕರಾವಳಿಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದ ಯುವಕ ಕುಮಾರಧಾರ ನದಿಗೆ ಬಿದ್ದು ನಾಪತ್ತೆ; ಪೊಲೀಸರು ಹಾಗೂ ಅಗ್ನಿಶಾಮಕ ದಳದಿಂದ...

ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದ ಯುವಕ ಕುಮಾರಧಾರ ನದಿಗೆ ಬಿದ್ದು ನಾಪತ್ತೆ; ಪೊಲೀಸರು ಹಾಗೂ ಅಗ್ನಿಶಾಮಕ ದಳದಿಂದ ಹುಡುಕಾಟ

spot_img
- Advertisement -
- Advertisement -

ಸುಬ್ರಮಣ್ಯ : ಅಕ್ಕಪಕ್ಕದ ಮನೆಯ  ಸ್ನೇಹಿತರ ಜೊತೆ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಇತರ ದೇವಸ್ಥಾನಕ್ಕೆ ಬಂದಿದ್ದ ಯುವಕರ ತಂಡದಲ್ಲಿದ್ದ ಒಬ್ಬ ಯುವಕ ಕುಮಾರಧಾರ ನದಿಯ ಸ್ನಾನ ಘಟ್ಟದಲ್ಲಿ ಸ್ನಾನ ಮಾಡಲು ಹಾರಿದ್ದು ಈ ವೇಳೆ ನೀರಿನ ಸೆಳೆತಕ್ಕೆ ನಾಪತ್ತೆಯಾಗದ ಘಟನೆ ಇಂದು ಸಂಜೆ ನಡೆದಿದೆ.

ಮಂಡ್ಯ ಜಿಲ್ಲೆಯ ಶಿವು(25) ನೀರಿನಲ್ಲಿ ನಾಪತ್ತೆಯಾದ ಯುವಕ . 21 ಜನರ ತಂಡದೊಂದಿಗೆ ಜಿಲ್ಲೆಯ ದೇವಸ್ಥಾನಗಳಿಗೆ ಬಂದಿದ್ದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದಿದ್ದು ಈ ವೇಳೆ ಕುಮಾರಧಾರ ನದಿಯಲ್ಲಿ ಸ್ನಾನ ಮಾಡಲು ಇಳಿದಿದ್ದಾರೆ.

ಇದರಲ್ಲಿ ಶಿವು ಎಂಬಾತ ಗೆಳೆಯರ ಮಾತು ಕೇಳದೆ ನೀರಿಗೆ ಹಾರಿದ್ದು ಈ ವೇಳೆ ನಾಪತ್ತೆಯಾಗಿದ್ದಾರೆ.ತಕ್ಷಣ ಸುಬ್ರಹ್ಮಣ್ಯ ಪೊಲೀಸರು ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿ ಹುಡುಕಾಟದಲ್ಲಿ ತೊಡಗಿದ್ದಾರೆ. ಶಿವು ಮಂಡ್ಯ ಜಿಲ್ಲೆಯವರಾಗಿದ್ದು ಬೆಂಗಳೂರಲ್ಲಿ ಉದ್ಯೋಗದಲ್ಲಿದ್ದಾ‌ರೆ.

- Advertisement -
spot_img

Latest News

error: Content is protected !!